ಸೆಪ್ಟೆಂ 19, 2017

ಕಾಣದ ಕಡಲಿನ ನನ್ನ ಭಾವ

ಸೋಲೆಂಬ ಸಾವದು  ಕ್ಷಣಕೊಮ್ಮೆ ಕುಟುಕಿಹುದು  ಮನವನ್ನು ,ಮತ್ಸರವ ತಂದಿಹುದು ಮನದಲ್ಲಿ .
ಸೋಲೆಂಬ ಸಾವದು ಪಾಪ ಪ್ರಜ್ಞೆಯದು ,ಅಶಾಂತಿಯ ತಂದಿಹುದು ನೆನೆ ನೆನೆದು ಮನದಲ್ಲಿ.
ಸೋಲೆಂಬ ಸಾವದು ಸೋತೆನೆಂಬ ಭಾವ, ಸಾವೆಂಬ ಸೋಲನ್ನು ಕರೆವುದು .

ಕರೆಯದಿರು ಜೀವ ಸಾವಿನ ಸೋಲನ್ನು , ಸೋತೆನೆಂಬ ಭಾವ ಬೇಡ ಎಂದಿಗೂ .
ನಡೆಯುತ್ತಿರು ಸತತ ಮತ್ತೊಂದು ಸಮರಕ್ಕೆ ,
ಸೋಲೆಂಬ  ಸಾವದು ಅನವರತ ಕ್ಷಣಿಕ ,ಸಾವೆಂಬ ಸೋಲು ಮುತ್ತಿಡುವ ತನಕ .

ಸಾವೆಂಬ ಯುಕ್ತಿಯದು ಭಗವಂತನದು , ಎಲ್ಲರನು  ಗೆಲ್ಲುವುದು .
ಸತ್ತಮೇಲೆ ಬದುಕುವುದು ಮತ್ತೊಂದು ಯುಕ್ತಿ , ಸವೆಯುವ ಬದುಕನ್ನು ಗೆದ್ದವರ ಮುಕ್ತಿ .
ಬದುಕುವ ಧ್ಯೇಯ ಬದುಕೊಂದೆ ಆಗಿರದೆ , ಮತ್ತೇನೋ ಆಗಿಹುದು ಭಗವಂತನಾಟ .

ಬುದ್ದಿಯ ಬಲವಿದು ಮೀರಿಹುದು ಎಲ್ಲೆಯನು , ಭಗವಂತನೊಂದಿಗೆ ಇಹುದು ಸೆಣಸಾಟ .
ಜೇಡರ ಬಲೆಯಲ್ಲಿ ಬಿದ್ದಿರುವ ಸೊಳ್ಳೆಗೆ , ಇಹುದು ಮತ್ತೊಂದು ಬಲಿಯ ಹುಡುಕಾಟ.
ಬಲಿಯ ನೋಡದೆ ಕೊರೆಯುತಿರು ಬಲೆಯನ್ನು , ತಿನ್ನದೇ ಬದುಕೆ  ನೀ ಸಿಕ್ಕಿರುವ ಬಲಿಯನ್ನು .

ಭುವಿಯ ಬದುಕಿದು ವಿಶ್ರಾಂತಿ ಧಾಮ , ನೀನೆಸಿದೊಡೆ ಏಕಾಂತದ ಬದುಕು ,
ಸೋಲದ ಸಮರವಿದು ಸಾವಿನಾವರೆಗೆ , ಗೆಲುವು ಬಯಸುವ ಜೀವದ ಕಡೆಗೆ .
ಸಾವಿನ ನಂತರದ ಖುಷಿಯದು ತಿನ್ನದಾ ಊಟ , ಬಾಣಸಿಗನ ಕೈಯ ಮಾಟ .







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್ ಅನ್ನು ಹುಡುಕಿ