ಸೆಪ್ಟೆಂ 19, 2017

ಕಾಣದ ಕಡಲಿನ ನನ್ನ ಭಾವ

ಸೋಲೆಂಬ ಸಾವದು  ಕ್ಷಣಕೊಮ್ಮೆ ಕುಟುಕಿಹುದು  ಮನವನ್ನು ,ಮತ್ಸರವ ತಂದಿಹುದು ಮನದಲ್ಲಿ .
ಸೋಲೆಂಬ ಸಾವದು ಪಾಪ ಪ್ರಜ್ಞೆಯದು ,ಅಶಾಂತಿಯ ತಂದಿಹುದು ನೆನೆ ನೆನೆದು ಮನದಲ್ಲಿ.
ಸೋಲೆಂಬ ಸಾವದು ಸೋತೆನೆಂಬ ಭಾವ, ಸಾವೆಂಬ ಸೋಲನ್ನು ಕರೆವುದು .

ಕರೆಯದಿರು ಜೀವ ಸಾವಿನ ಸೋಲನ್ನು , ಸೋತೆನೆಂಬ ಭಾವ ಬೇಡ ಎಂದಿಗೂ .
ನಡೆಯುತ್ತಿರು ಸತತ ಮತ್ತೊಂದು ಸಮರಕ್ಕೆ ,
ಸೋಲೆಂಬ  ಸಾವದು ಅನವರತ ಕ್ಷಣಿಕ ,ಸಾವೆಂಬ ಸೋಲು ಮುತ್ತಿಡುವ ತನಕ .

ಸಾವೆಂಬ ಯುಕ್ತಿಯದು ಭಗವಂತನದು , ಎಲ್ಲರನು  ಗೆಲ್ಲುವುದು .
ಸತ್ತಮೇಲೆ ಬದುಕುವುದು ಮತ್ತೊಂದು ಯುಕ್ತಿ , ಸವೆಯುವ ಬದುಕನ್ನು ಗೆದ್ದವರ ಮುಕ್ತಿ .
ಬದುಕುವ ಧ್ಯೇಯ ಬದುಕೊಂದೆ ಆಗಿರದೆ , ಮತ್ತೇನೋ ಆಗಿಹುದು ಭಗವಂತನಾಟ .

ಬುದ್ದಿಯ ಬಲವಿದು ಮೀರಿಹುದು ಎಲ್ಲೆಯನು , ಭಗವಂತನೊಂದಿಗೆ ಇಹುದು ಸೆಣಸಾಟ .
ಜೇಡರ ಬಲೆಯಲ್ಲಿ ಬಿದ್ದಿರುವ ಸೊಳ್ಳೆಗೆ , ಇಹುದು ಮತ್ತೊಂದು ಬಲಿಯ ಹುಡುಕಾಟ.
ಬಲಿಯ ನೋಡದೆ ಕೊರೆಯುತಿರು ಬಲೆಯನ್ನು , ತಿನ್ನದೇ ಬದುಕೆ  ನೀ ಸಿಕ್ಕಿರುವ ಬಲಿಯನ್ನು .

ಭುವಿಯ ಬದುಕಿದು ವಿಶ್ರಾಂತಿ ಧಾಮ , ನೀನೆಸಿದೊಡೆ ಏಕಾಂತದ ಬದುಕು ,
ಸೋಲದ ಸಮರವಿದು ಸಾವಿನಾವರೆಗೆ , ಗೆಲುವು ಬಯಸುವ ಜೀವದ ಕಡೆಗೆ .
ಸಾವಿನ ನಂತರದ ಖುಷಿಯದು ತಿನ್ನದಾ ಊಟ , ಬಾಣಸಿಗನ ಕೈಯ ಮಾಟ .







ಸೆಪ್ಟೆಂ 15, 2017

ಪಕ್ಕದ ಮನೆಯವಳು




ಪಕ್ಕದ ಮನೆಯವಳ್ಯಾಕೋ ತುಂಬಾ ಚೆನ್ನಾಗಿ ಕಾಣ್ತಾಳೆ
ಹೆಂಡತಿಗಿಂತ ತುಂಬಾ ಒಳ್ಳೆಯವಳಂತ ಅನುಸ್ತಾಳೆ.

ಅವಳ ಮೌನದಾಗಿರೋ ಚೆಂದ
ಹೆಂಡ್ತಿ ಮಾತಲ್ಲಿ ಕಾಣ್ತಿಲ್ಲ .

ಅವಳ ಕೈಯಲ್ಲಿ ಕಾಣಿಸೋ ರುಚಿಯು
ಹೆಂಡ್ತಿ ಅಡುಗೆಲೇ ಇಲ್ಲ .

ಏನಿದು ಮಾಯೆ ? ದೂರದ ಬೆಟ್ಟವಲ್ಲ ಆಕೆ  .
ಕೈಗೆಟುಕದ ದ್ರಾಕ್ಷಿಯಾದರೂ  ಹುಳಿ ಯೇ  ಅನ್ನಿಸ್ತಿಲ್ಲ .

ಕಣ್ಣಿನ ರುಚಿಯಿದು , ಮನಸಿನ ಬಗೆಯಿದು .
ಪಕ್ಕದ ಮನೆಯಾವಳ್ಯಾಕೋ ಚೆಂದ 

ಈ ಬ್ಲಾಗ್ ಅನ್ನು ಹುಡುಕಿ