ನಿನ್ನೆ ಬಂಗಾರಿ ೨೪ * ೭ ನ್ಯೂಸ್ ಚಾನೆಲ್ಲಿನ ಎಕ್ಷ್ಕ್ಲುಸಿವ್ ನ್ಯೂಸ್ ಏನಪ್ಪಾ ಅಂದ್ರೆ , ಅಲ್ಲಿ ದುರ್ಗದಲ್ಲಿ ಯಾವನೋ ಕುಡುದು ಮರ ಹತ್ತಿದ್ದನಂತೆ , ಸುಮಾರು ಹೊತ್ತು ಕಷ್ಟ ಪಟ್ಟು ಜನ ಅವನನ್ನ ಕೆಳಗೆ ಇಳ್ಸಿದ್ರಂತೆ, ಸ್ವಲ್ಪ ಹೊತ್ತಾದ ಮೇಲೆ ಅವನು ನೀರಿನ ಟ್ಯಾಂಕ್ ಮೇಲೆ ಹೋಗಿ ಕೂತ್ಕಂಡ್ನಂತೆ, ಅವನನ್ನ ಪೊಲೀಸರು ಜನಗಳು ಕಷ್ಟ ಪಟ್ಟು , ಹರ ಸಾಹಸ ಮಾಡಿ ಕೆಳಗೆ ಇಳಿಸಿದರಂತೆ .
ಅಲಾಲಲ ಸಿಂಗ್ರಿ, ಅವನ ಜೊತೆಗೆ ನೀನು ಕೂತ್ಕಂಡು ಪೆಗ್ಗ್ ಹಾಕಿತಿದ್ದ್ಯ ಮಗಾ , ಅದ್ಯಾವ ಸೀಮೆ ಕಳ್ಳಬಟ್ಟಿಸಾರಾಯಿ ಕುಡಿದಿಯೋ, ನಿನ್ನ ಗೆಳೆಯ ಗಿಡ ಹತ್ತಿದ್ದು ಕ್ಯಾಮೆರದಾಗ ಹಿಡ್ಕೊಂಡು ದೊಡ್ಡ ನ್ಯೂಸ್ ಅನ್ನಂಗೆ ತೋರಿಸಿ ಬಿಟ್ಟೆ , ಅಲಾಲ ಸಿಂಗ್ರಿ , ನಿಮ್ಮು ರೀಡರ್ ಪ್ರಶ್ನೆ ಮೇಲೆ ಪ್ರಶ್ನೆ , ಇದು ಎಸ್ತೋತ್ತಿಗಾಯ್ತು , ಎಂಗಾಯ್ತು , ಜನ ಎನ್ಮಾಡ್ತಿದ್ದರೆ ಕೇಳಿದ್ದೆ , ಕೇಳಿದ್ದು .... ಸಿಂಗ್ರಿ .. ಸಿಂಗ್ರಿ ಕಿಸ್ಕಂಡು,ಕಿಸ್ಕಂಡು ಹೇಳಿದ್ದೆ .. ಹೇಳಿದ್ದು
ಸಿಂಗ್ರಿ ಕಡಿಮೆ ಕುಡಿ ಕಣ್ಲಾ, ನೀರಿನ ಟ್ಯಾಂಕ್ ಹತ್ತಿದರೆ ಕೆಳಗೆ ಇಳಸಬಹುದು, ನ್ಯೂಸ್ ನ ಚಟ್ಟ ಹತ್ತಿಸ್ದ್ರೆ ಇಳ್ಸಾಕಾಗಕಿಲ್ಲ . ಸುವರ್ಣ ಅಂದ್ರೆ ಬಂಗಾರ ಕಣ್ಲಾ , ಸುವರ್ naa ಅಂತ ಅಲ್ಲ ...
ಮುಳುಗಲು ಸಾಧ್ಯವೇ ಇಲ್ಲ ಎಂದು ಬಣ್ಣಿಸಲಾದ ಟೈಟಾನಿಕ್ ಕೂಡಾ ಮುಳುಗುತ್ತದೆ. ಸಹಸ್ರ ಬದುಕುಗಳ ಭಗ್ನ ಪ್ರತಿಮೆಗಳನ್ನು ಸ್ರುಷ್ಟಿಸುತ್ತದೆ ಆದರೆ ಮಾನವನ ಆಶೋತ್ತರಗಳ ನೌಕೆ ಎಂದಿಗೂ ಮುಳುಗಲು ಸಾಧ್ಯವಿಲ್ಲ.
ಮೇ 30, 2010
ಮೇ 28, 2010
ಮತ್ತು, ಮತ್ತು, ಮತ್ತು ಗಮ್ಮತ್ತು
ಎದೆಯ ಬಡಿತ ನಿಲ್ಲುವುದನೆ
ಕಾಯುತಿರುವ ಮಿದುಳ ಮಿಡಿತ
ಹೃದಯವನ್ನ ಬಗೆಯುತಿರುವ, ಚಿಂತೆ ಕೊರೆತ
ಮೀರಿ ನಿಂತು ಮೆಟ್ಟಿಬಿಡುವುದು ,
ಮದಿರೆ ನಿನ್ನ ಹೀರುವ ತವಕ
ಗತ್ತಿನಲ್ಲಿ ಹೀರುವಾಗ , ಮತ್ತಿನಲ್ಲಿ ತೇಲುವಾಗ
ಯಾವ ಖುಶಿಯು ಸಾಟಿ ಹೇಳು ನೋವೆ ಮರೆತು ಹೋಗುವಾಗ
ನಿನ್ನ ರುಚಿಯ ಸವಿಯಲಿಕ್ಕೆ ಬೇಕು ಮನಕೆ ಬೇಸಿಗೆ
ಅರ್ಥವಾಗದು ಎಂದಿಗೂ ಕಹಿಯ ಸವಿಯು ಜಿಹ್ವೆಗೆ
ಮದಿರೆ ನಿನ್ನ ಮುತ್ತಿಗೆ , ನೀ ಕೊಡುವ ಮತ್ತಿಗೆ
ಗಮ್ಮತು , ಆಹ್ಲಾದ ಇಂದೇ ನನ್ನ ಬುಟ್ಟಿಗೆ
ನೀನೊಬ್ಬಳೆ ಸುಂದರಿ , ಆಗಬೇಡ ತಾಟಕಿ
ತೇಲಬೇಕು ನಾನು ಈಗ , ತೆವಳಲಾರೆ ನರ್ತಕಿ
ಕಾಯುತಿರುವ ಮಿದುಳ ಮಿಡಿತ
ಹೃದಯವನ್ನ ಬಗೆಯುತಿರುವ, ಚಿಂತೆ ಕೊರೆತ
ಮೀರಿ ನಿಂತು ಮೆಟ್ಟಿಬಿಡುವುದು ,
ಮದಿರೆ ನಿನ್ನ ಹೀರುವ ತವಕ
ಗತ್ತಿನಲ್ಲಿ ಹೀರುವಾಗ , ಮತ್ತಿನಲ್ಲಿ ತೇಲುವಾಗ
ಯಾವ ಖುಶಿಯು ಸಾಟಿ ಹೇಳು ನೋವೆ ಮರೆತು ಹೋಗುವಾಗ
ನಿನ್ನ ರುಚಿಯ ಸವಿಯಲಿಕ್ಕೆ ಬೇಕು ಮನಕೆ ಬೇಸಿಗೆ
ಅರ್ಥವಾಗದು ಎಂದಿಗೂ ಕಹಿಯ ಸವಿಯು ಜಿಹ್ವೆಗೆ
ಮದಿರೆ ನಿನ್ನ ಮುತ್ತಿಗೆ , ನೀ ಕೊಡುವ ಮತ್ತಿಗೆ
ಗಮ್ಮತು , ಆಹ್ಲಾದ ಇಂದೇ ನನ್ನ ಬುಟ್ಟಿಗೆ
ನೀನೊಬ್ಬಳೆ ಸುಂದರಿ , ಆಗಬೇಡ ತಾಟಕಿ
ತೇಲಬೇಕು ನಾನು ಈಗ , ತೆವಳಲಾರೆ ನರ್ತಕಿ
ಕಿಮ್ಮತ್ತು
ಕತ್ತಲೆ ಇರದೆ ಬೆಳಕಿಗೆ ಏನಿದೆ ಕಿಮ್ಮತ್ತು ?
ಹಸಿವೆಯು ಇರದೆ ಅನ್ನಕೆ ಏನಿದೆ ಕಿಮ್ಮತ್ತು ?
ಸೋಲೇ ಇಲ್ಲದೆ ಗೆಲುವಿಗೆ ಏನಿದೆ ಕಿಮ್ಮತ್ತು ?
ದುಃಖವು ಇರದೆ ಸಂತಸ ಕ್ಕೆನಿದೆ ಕಿಮ್ಮತ್ತು ?
ಸಾವೇ ಇರದೆ ಬದುಕಿಗೆ ಏನಿದೆ ಕಿಮ್ಮತ್ತು ?
ಕತ್ತಲೆಯಿಂದ ಬೆಳಕಿನೆಡೆಗೆ
ಬೆಳಕಿನಿಂದ ಕತ್ತಲೆಯೆಡೆಗೆ
ಹಸಿವಿನಿಂದ ಅನ್ನದೆಡೆಗೆ
ಅನ್ನದಿಂದ ಹಸಿವಿನೆಡೆಗೆ
ದುಃಖದಿಂದ ಸಂತಸದೆಡೆಗೆ
ಸಂತಸದಿಂದ ದುಃಖದೆಡೆಗೆ
ವಿಧಿ ನಡೆಸುವ ದಾರಿಯ ಗುರುತು ಗೊತ್ತಾಗುವುದು ಎಲ್ಲರಿಗೂ
ಸಾವು - ಬದುಕಿನ ಪಯಣದ ಹಾದಿ ತಿಳಿದೇ ಇಲ್ಲ ಯಾರಿಗೂ
ಹಸಿವೆಯು ಇರದೆ ಅನ್ನಕೆ ಏನಿದೆ ಕಿಮ್ಮತ್ತು ?
ಸೋಲೇ ಇಲ್ಲದೆ ಗೆಲುವಿಗೆ ಏನಿದೆ ಕಿಮ್ಮತ್ತು ?
ದುಃಖವು ಇರದೆ ಸಂತಸ ಕ್ಕೆನಿದೆ ಕಿಮ್ಮತ್ತು ?
ಸಾವೇ ಇರದೆ ಬದುಕಿಗೆ ಏನಿದೆ ಕಿಮ್ಮತ್ತು ?
ಕತ್ತಲೆಯಿಂದ ಬೆಳಕಿನೆಡೆಗೆ
ಬೆಳಕಿನಿಂದ ಕತ್ತಲೆಯೆಡೆಗೆ
ಹಸಿವಿನಿಂದ ಅನ್ನದೆಡೆಗೆ
ಅನ್ನದಿಂದ ಹಸಿವಿನೆಡೆಗೆ
ದುಃಖದಿಂದ ಸಂತಸದೆಡೆಗೆ
ಸಂತಸದಿಂದ ದುಃಖದೆಡೆಗೆ
ವಿಧಿ ನಡೆಸುವ ದಾರಿಯ ಗುರುತು ಗೊತ್ತಾಗುವುದು ಎಲ್ಲರಿಗೂ
ಸಾವು - ಬದುಕಿನ ಪಯಣದ ಹಾದಿ ತಿಳಿದೇ ಇಲ್ಲ ಯಾರಿಗೂ
ಮೇ 6, 2010
24 X 7 ನ್ಯೂಸ್ ಚಾನೆಲ್ಲುಗಳ ದೊಂಬರಾಟ
ಬೇಡಲು ಬರ್ತಿದ್ದ ದೊಂಬರಿಗೆ ಬರುತ್ತಿದ್ದದ್ದು ಒಂದೇ ಒಂದು ನಾಟಕ , ಅದು ಶ್ರೀ ರಾಮಾಯಣ.
ಮುಖಕ್ಕೆ ನೀಲಿ ಬಣ್ಣ ಹಾಕಿಕೊಂಡ ರಾಮ , ಬಾಲವಿದ್ದ ಹನುಮಂತ ,ಸೀತೆ.
ಒಂದು ಹಾರ್ಮೋನಿಯಂ ಮತ್ತು ರಾಮನ ಅವತಾರ , ರಘುಕುಲ ಸೋಮನ ಅವತಾರ ಹಾಡಿನ ಒಂದು ಪ್ಯಾರ ಇಷ್ಟರಲ್ಲೆ ದೊಂಬರ ಬದುಕು.
ಅದೇ ಹಾಡನ್ನ ಊರಿನ ಮನೆ ಮನೆಗೂ ಹೋಗಿ , ಹಾಡುತ್ತಿದ್ದ ದೊಂಬರು ಬೇಡಲು ಬರುತ್ತಿದ್ದದ್ದು ವರ್ಷಕ್ಕೆ ಒಂದೇ ಸಾರಿ , ಹಾಗಾಗಿಅದೇ ಹಾಡು ಯಾರಿಗೂ ಬೇಸರ ತರುತ್ತಿರಲ್ಲಿಲ್ಲ , ಊರೂರು ತಿರುಗಿ ಬದುಕುತ್ತಿದ್ದ ದೊಂಬರಿಗೆ ಎರಡನೇ ಹಾಡಿನ ಅವಶ್ಯಕತೆಇರಲ್ಲಿಲ್ಲ .
ಇತ್ತೀಚಿಗೆ ಬಹುಶಃ ದೊಂಬರು ಕೂಡ ಬದುಕಲು ಬೇರೆ ಮಾರ್ಗಗಳನ್ನ ಹುಡುಕಿಕೊಂಡಿದ್ದಾರೆ.
ಈಗ ಹೊಸ ತರಹದ ದೊಂಬರು ಬಂದಿದ್ದಾರೆ . ಸಾಮಾಜಿಕ ಜವಾಬ್ದಾರಿ ಇದೆ ಎಂದು ಬೀಗುವ , ಸಾಕಷ್ಟು ಶಕ್ತಿವಂತರಾಗಿರುವ,ಎಲ್ಲರ ಮನೆಯಲ್ಲೂ ಒಂದೇ ಸಾರಿ ಹಾಡಬಲ್ಲ , ಸಾಕಷ್ಟು ವಿದ್ಯಾವಂತರಾಗಿರುವ , ವಿಚಾರವಂತರೆಂಬ ಹುಸಿ ನಂಬಿಕೆಯ ಮೂಡ ಜನ. ಯಾರು ಗೊತ್ತಾಯ್ತ 24 X 7 ನ್ಯೂಸ್ ಚಾನೆಲ್ಲುಗಳು , ಹಾಡಿದ್ದೆ ಹಾಡೋ ಕಿಸಬಾಯಿ ದಾಸರು .
ದುರಂತ ಅಂದರೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ದೊಂಬರು ಇವರು .
ಇತ್ತೀಚಿಗೆ breaking news ಅಂತ ಇವರು ತೋರಿಸಿದ headline gotta ?
karnataka rape case CID to probe ಇದು ನ್ಯಾಷನಲ್ ಲೆವೆಲ್ ದೊಂಬರ ಕತೆ .
ಏನಪ್ಪಾ ಕರ್ನಾಟಕ rape ಅಂದ್ರೆ ?, ರಾಮಾಯಣದ ಹಾಡು ದೊಂಬರು ತಪ್ಪು ಹಾಡಿದರೆ ಪರವಾಗಿಲ್ಲ , ಈ ವಿದ್ಯಾವಂತರು ಹೇಳೋ ಸ್ಪಷ್ಟತೆ ಹೇಗಿದೆ ನೋಡಿ ?
ಇಪ್ಪತ್ನಾಲಕ್ಕು ಗಂಟೆ ಸಮಾಚಾರ ಹೇಳ್ತಿವಿ ಅಂತ ಬೊಗಳೆ ಬಿಡೋ ಇವರತ್ರ ಇರೋ ಸಮಾಚಾರದ ಯೋಗ್ಯತೆ ಏನು ಅಂತ , ಇವ್ರು ಪದೇ ಪದೇ ತೋರಿಸೋ ವೀಡಿಯೊ ಕ್ಲಿಪ್ಪುಗಳು , ಸಿನಿಮ ನಟರ ಸುದ್ದಿ ಹೇಳೋವಾಗ ಬರುವ ಮಾದಕ ದೃಶ್ಯಾವಳಿ , ಅಷ್ಟೇ ಯಾಕೆ ಮೊನ್ನೆ ಸಾನಿಯಾ ಮದುವೆ ಟೈಮಲ್ಲಿ ಇವರು ತೋರಿಸಿದ ಅವಳ ಅರೆ ಬಟ್ಟೆ ಫೋಟೋ ಗಳು ಸಾರಿ ,ಸಾರಿ ಹೇಳುತ್ತವೆ.
ಇವರು ಸಮಾಚಾರದ ಹೆಸರಲ್ಲಿ ಮಾರುತ್ತಿರುವುದು 24 X 7 ಮಸಾಲ . ಇತ್ತೀಚಿಗೆ ಈ ಸಾಮಾಜಿಕ ಕಳಕಳಿಯ ಕಳ್ಳರು ಸರ್ಕಾರದ ಭವಿಷ್ಯವನ್ನು ಕೇಳಲಿಕ್ಕೆ ಶುರು ಮಾಡಿದ್ದಾರೆ. ಮಂತ್ರಿಗಳಾಡೋ ಜಗಳಕ್ಕೆ , ಸರ್ಕಾರದ ಗ್ರಹ ಗತಿ ಕಾರಣ , ಕರ್ನಾಟಕ ದ ಜನ ಇನ್ನ ಕುಂಡಲಿ , ಸಮಯ ನೋಡಿ ಓಟು ಹಾಕಬೇಕು. ವಿದ್ಯಾವಂತ , ಪ್ರಜ್ಞಾವಂತರು ಜನಕ್ಕೆ ಸಮಾಚಾರದಲ್ಲಿ ತೋರಿಸಿತ್ತಿರುವುದು , ರಾಹು , ಕೇತು ಗಳ ಪೋಷಿಷನ್ನು .
ಛಿ , ಥೂ!! , ಛಿ , ಥೂ!!
ಮುಖಕ್ಕೆ ನೀಲಿ ಬಣ್ಣ ಹಾಕಿಕೊಂಡ ರಾಮ , ಬಾಲವಿದ್ದ ಹನುಮಂತ ,ಸೀತೆ.
ಒಂದು ಹಾರ್ಮೋನಿಯಂ ಮತ್ತು ರಾಮನ ಅವತಾರ , ರಘುಕುಲ ಸೋಮನ ಅವತಾರ ಹಾಡಿನ ಒಂದು ಪ್ಯಾರ ಇಷ್ಟರಲ್ಲೆ ದೊಂಬರ ಬದುಕು.
ಅದೇ ಹಾಡನ್ನ ಊರಿನ ಮನೆ ಮನೆಗೂ ಹೋಗಿ , ಹಾಡುತ್ತಿದ್ದ ದೊಂಬರು ಬೇಡಲು ಬರುತ್ತಿದ್ದದ್ದು ವರ್ಷಕ್ಕೆ ಒಂದೇ ಸಾರಿ , ಹಾಗಾಗಿಅದೇ ಹಾಡು ಯಾರಿಗೂ ಬೇಸರ ತರುತ್ತಿರಲ್ಲಿಲ್ಲ , ಊರೂರು ತಿರುಗಿ ಬದುಕುತ್ತಿದ್ದ ದೊಂಬರಿಗೆ ಎರಡನೇ ಹಾಡಿನ ಅವಶ್ಯಕತೆಇರಲ್ಲಿಲ್ಲ .
ಇತ್ತೀಚಿಗೆ ಬಹುಶಃ ದೊಂಬರು ಕೂಡ ಬದುಕಲು ಬೇರೆ ಮಾರ್ಗಗಳನ್ನ ಹುಡುಕಿಕೊಂಡಿದ್ದಾರೆ.
ಈಗ ಹೊಸ ತರಹದ ದೊಂಬರು ಬಂದಿದ್ದಾರೆ . ಸಾಮಾಜಿಕ ಜವಾಬ್ದಾರಿ ಇದೆ ಎಂದು ಬೀಗುವ , ಸಾಕಷ್ಟು ಶಕ್ತಿವಂತರಾಗಿರುವ,ಎಲ್ಲರ ಮನೆಯಲ್ಲೂ ಒಂದೇ ಸಾರಿ ಹಾಡಬಲ್ಲ , ಸಾಕಷ್ಟು ವಿದ್ಯಾವಂತರಾಗಿರುವ , ವಿಚಾರವಂತರೆಂಬ ಹುಸಿ ನಂಬಿಕೆಯ ಮೂಡ ಜನ. ಯಾರು ಗೊತ್ತಾಯ್ತ 24 X 7 ನ್ಯೂಸ್ ಚಾನೆಲ್ಲುಗಳು , ಹಾಡಿದ್ದೆ ಹಾಡೋ ಕಿಸಬಾಯಿ ದಾಸರು .
ದುರಂತ ಅಂದರೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ದೊಂಬರು ಇವರು .
ಇತ್ತೀಚಿಗೆ breaking news ಅಂತ ಇವರು ತೋರಿಸಿದ headline gotta ?
karnataka rape case CID to probe ಇದು ನ್ಯಾಷನಲ್ ಲೆವೆಲ್ ದೊಂಬರ ಕತೆ .
ಏನಪ್ಪಾ ಕರ್ನಾಟಕ rape ಅಂದ್ರೆ ?, ರಾಮಾಯಣದ ಹಾಡು ದೊಂಬರು ತಪ್ಪು ಹಾಡಿದರೆ ಪರವಾಗಿಲ್ಲ , ಈ ವಿದ್ಯಾವಂತರು ಹೇಳೋ ಸ್ಪಷ್ಟತೆ ಹೇಗಿದೆ ನೋಡಿ ?
ಇಪ್ಪತ್ನಾಲಕ್ಕು ಗಂಟೆ ಸಮಾಚಾರ ಹೇಳ್ತಿವಿ ಅಂತ ಬೊಗಳೆ ಬಿಡೋ ಇವರತ್ರ ಇರೋ ಸಮಾಚಾರದ ಯೋಗ್ಯತೆ ಏನು ಅಂತ , ಇವ್ರು ಪದೇ ಪದೇ ತೋರಿಸೋ ವೀಡಿಯೊ ಕ್ಲಿಪ್ಪುಗಳು , ಸಿನಿಮ ನಟರ ಸುದ್ದಿ ಹೇಳೋವಾಗ ಬರುವ ಮಾದಕ ದೃಶ್ಯಾವಳಿ , ಅಷ್ಟೇ ಯಾಕೆ ಮೊನ್ನೆ ಸಾನಿಯಾ ಮದುವೆ ಟೈಮಲ್ಲಿ ಇವರು ತೋರಿಸಿದ ಅವಳ ಅರೆ ಬಟ್ಟೆ ಫೋಟೋ ಗಳು ಸಾರಿ ,ಸಾರಿ ಹೇಳುತ್ತವೆ.
ಇವರು ಸಮಾಚಾರದ ಹೆಸರಲ್ಲಿ ಮಾರುತ್ತಿರುವುದು 24 X 7 ಮಸಾಲ . ಇತ್ತೀಚಿಗೆ ಈ ಸಾಮಾಜಿಕ ಕಳಕಳಿಯ ಕಳ್ಳರು ಸರ್ಕಾರದ ಭವಿಷ್ಯವನ್ನು ಕೇಳಲಿಕ್ಕೆ ಶುರು ಮಾಡಿದ್ದಾರೆ. ಮಂತ್ರಿಗಳಾಡೋ ಜಗಳಕ್ಕೆ , ಸರ್ಕಾರದ ಗ್ರಹ ಗತಿ ಕಾರಣ , ಕರ್ನಾಟಕ ದ ಜನ ಇನ್ನ ಕುಂಡಲಿ , ಸಮಯ ನೋಡಿ ಓಟು ಹಾಕಬೇಕು. ವಿದ್ಯಾವಂತ , ಪ್ರಜ್ಞಾವಂತರು ಜನಕ್ಕೆ ಸಮಾಚಾರದಲ್ಲಿ ತೋರಿಸಿತ್ತಿರುವುದು , ರಾಹು , ಕೇತು ಗಳ ಪೋಷಿಷನ್ನು .
ಛಿ , ಥೂ!! , ಛಿ , ಥೂ!!
ಮೇ 4, 2010
ಮಿನಿಸ್ಟ್ರಾಯ್ತಿಯ
ಮಿನಿಸ್ಟ್ರು ಮನೆಗೆ ಹೊಗಾಕಿಲ್ಲ .
ಅವ್ರೆನಿದ್ರು ಆಸ್ಪತ್ರಿಗೆ ಹೋಗ್ತಾರೆ .
ನರಸಮ್ಮ ನ್ನ ನೋಡಾಕೆ .
ಮಿನಿಸ್ಟ್ರು ಮನೆಗೆ ಹೊಗಾಕಿಲ್ಲ .
ಅವ್ರೆನಿದ್ರು ಬೇರೆಯವರ ಮನಿಗೆ ಹೋಗ್ತಾರೆ .
ಅವ್ರಿಗೆ ಆರಾಮಿರಕಿಲ್ಲ .
ಟಿವಿ ದೊರು ಕಮ್ಮಿ ಇಲ್ಲ .
ಮಿನಿಸ್ಟ್ರ ಮನಿಗೆ ಹೋಗ್ತಾರೆ .
ಮಿನಿಸ್ಟ್ರು ಮನಿಗೆ ಹೊಗಾಕಿಲ್ಲ .
ಇದೇನು ಬಂತೋ ಗ್ರಹಚಾರ
ಯಾರು ಎಲ್ಲಿ ಹೋದರು
ಮೊಬೈಲ್ ಕ್ಯಾಮರ ಬಿಡಾಕಿಲ್ಲ .
ಕ್ಯಾಮರದಾಗ ಎಲ್ಲರು
ಉಮೇಶ್ ರೆಡ್ಡಿ ಪಡಿಯಚ್ಚು .
ಅದ್ರೂನು ರಾಮನೇ ಎಲ್ಲರಿಗು ಅಚ್ಚು ಮೆಚ್ಚು .
ಟಿವಿದೊರು ಕಮ್ಮಿ ಇಲ್ಲ .
ಅವ್ರ ಸುದ್ದಿ ಬರಂಗಿಲ್ಲ .
ಕೇಸು ಮುಗಿದ ಮೇಲೆ ಕಳದ ಮಾನ ಕೊಡಂಗಿಲ್ಲ .
ಕೋಡಂಗಿ ಮಾರ ಕಚ್ಚೆ ಉಟ್ಕೋ ಬ್ಯಾಡ
ಮಿನಿಸ್ಟ್ರಾಯ್ತಿಯ .
ಅವ್ರೆನಿದ್ರು ಆಸ್ಪತ್ರಿಗೆ ಹೋಗ್ತಾರೆ .
ನರಸಮ್ಮ ನ್ನ ನೋಡಾಕೆ .
ಮಿನಿಸ್ಟ್ರು ಮನೆಗೆ ಹೊಗಾಕಿಲ್ಲ .
ಅವ್ರೆನಿದ್ರು ಬೇರೆಯವರ ಮನಿಗೆ ಹೋಗ್ತಾರೆ .
ಅವ್ರಿಗೆ ಆರಾಮಿರಕಿಲ್ಲ .
ಟಿವಿ ದೊರು ಕಮ್ಮಿ ಇಲ್ಲ .
ಮಿನಿಸ್ಟ್ರ ಮನಿಗೆ ಹೋಗ್ತಾರೆ .
ಮಿನಿಸ್ಟ್ರು ಮನಿಗೆ ಹೊಗಾಕಿಲ್ಲ .
ಇದೇನು ಬಂತೋ ಗ್ರಹಚಾರ
ಯಾರು ಎಲ್ಲಿ ಹೋದರು
ಮೊಬೈಲ್ ಕ್ಯಾಮರ ಬಿಡಾಕಿಲ್ಲ .
ಕ್ಯಾಮರದಾಗ ಎಲ್ಲರು
ಉಮೇಶ್ ರೆಡ್ಡಿ ಪಡಿಯಚ್ಚು .
ಅದ್ರೂನು ರಾಮನೇ ಎಲ್ಲರಿಗು ಅಚ್ಚು ಮೆಚ್ಚು .
ಟಿವಿದೊರು ಕಮ್ಮಿ ಇಲ್ಲ .
ಅವ್ರ ಸುದ್ದಿ ಬರಂಗಿಲ್ಲ .
ಕೇಸು ಮುಗಿದ ಮೇಲೆ ಕಳದ ಮಾನ ಕೊಡಂಗಿಲ್ಲ .
ಕೋಡಂಗಿ ಮಾರ ಕಚ್ಚೆ ಉಟ್ಕೋ ಬ್ಯಾಡ
ಮಿನಿಸ್ಟ್ರಾಯ್ತಿಯ .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಈ ಬ್ಲಾಗ್ ಅನ್ನು ಹುಡುಕಿ
- ಏಪ್ರಿಲ್ 2020 (1)
- ಮಾರ್ಚ್ 2020 (1)
- ಸೆಪ್ಟೆಂಬರ್ 2019 (1)
- ಸೆಪ್ಟೆಂಬರ್ 2017 (2)
- ಅಕ್ಟೋಬರ್ 2010 (1)
- ಮೇ 2010 (5)
- ಏಪ್ರಿಲ್ 2010 (8)
- ನವೆಂಬರ್ 2008 (1)
- ಆಗಸ್ಟ್ 2008 (1)
- ಜುಲೈ 2008 (5)
- ಜೂನ್ 2008 (3)
- ಮೇ 2008 (3)
- ಮಾರ್ಚ್ 2008 (5)