ಜೂನ್ 14, 2008

ನೆನಪಾಗಿ ಕಾಡುತ್ತಿರುವ ಆಡದ ಮಾತುಗಳು ಮತ್ತು ಬೆಳದಿಂಗಳ ಬಾಲೆ

ಮತ್ತೆ ಬೆಳದಿಂಗಳ ಬಾಲೆ ಸಿನೆಮಾ ನೋಡಿದೆ. ಮೊದಲಿನಂತೆ ಸಲ ಕೂಡ ಬಹಳ ಚೆನ್ನಾಗಿದೆ ಅನ್ನಿಸಿತು.
ಅನಂತ್ನಾಗ್ ಬೊಂಬಟ್ ಅಭಿನಯ , ಸುಮನ್ ನಗರ್ಕರ್ ಮುದ್ದು ಮುಖ,ಸುನಿಲ್ ಕುಮಾರ್ ದೆಸಾಯಿಯವರ ಒಳ್ಳೆನಿರ್ದೇಶನ ಎಂಥವರನ್ನು ಮರುಳುಮಾಡಬಲ್ಲ ಕತೆ.

ಮೊದಲನೆ ಸಲ ಸಿನೆಮಾ ನೋಡಿದಾಗ ಕೊನೆಗೆ ಕಣ್ಣೀರಿಟ್ಟಿದ್ದೆ.ನನ್ನ ಬೆಳದಿಂಗಳ ಬಾಲೆ ನನ್ನ ಕೈತಪ್ಪದಿರುವಂತೆಎಚ್ಚರಿಕೆಯಿಂದಿರಬೇಕು ಅಂತ ನಿರ್ಧಾರ ಕೂಡಾ ಮಾಡಿದ್ದೆ. ಆದರೆ ನಾನು ತುಂಬಾ ಚಿಕ್ಕವನಾಗಿದ್ದೆ ಆಗ ನನಗೆ ಅಂಥಾ ಬಾಲೆಯಸ್ವಂತದ ಒಂದು ಸಣ್ಣ ಕಲ್ಪನೆಯೂ ಇರಲ್ಲಿಲ್ಲ.
ಆದರೆ ಸಿನೆಮಾ ನೋಡಿ ಒಬ್ಬ ಬಾಲೆ ಇರಲೇಬೇಕು ಅನ್ನೊ ಸತ್ಯ ಅಷ್ಟೋ ಇಷ್ಟೊ ಗೊತ್ತಾಗಿತ್ತು.

ಬೆಲದಿಂಗಳಬಾಲೆಯ ಹುರುಪಿನಲ್ಲೆ ನನ್ನವಳಲಲ್ಲದ ನನ್ನವಳಿಗಾಗಿ ಪತ್ರ ಮತ್ತು ಕವನಗಳನ್ನ ಬರೆಯಲು ಶುರು ಮಾಡಿದೆ. ಪತ್ರಬರೆಯಲು ಕುಳಿತಾಗ ಶಬ್ದಗಳಿಗಾಗಿ ತಡಕಾಡಿದೆ,ಹೇಗೆ ಶುರು ಮಾಡಬೇಕು ಅಂತ ಗೊತ್ತಾಗದೆ ನರಳಿದೆ.ಸುಮಾರು ಶಬ್ದಗಳನ್ನಬರೆದು ಕಾಗದ ಹರಿದು ಹಾಕಿದೆ!

ಹಾಗೋ ಹೀಗೋ ಕಷ್ಟಪಟ್ಟು ನನಗೆ ಸಮಾಧಾನವಾಗೊ ಹಾಗೆ ಬರೆದ ಮೇಲೆ ಮನೆಯಲ್ಲಿ ಯಾರಿಗೂ ಕಾಣದಂತೆ ಅದನ್ನ ಬಚ್ಚಿಟ್ಟುಕಾಪಾದಿದ್ದು ಆಯ್ತು. ಹಾಗೆ ನಾ ಬರೆದ ಕವನಗಳಲ್ಲಿ ಕೆಲವನ್ನು ಈಗಾಗಲೆ ತೆರೆದಿಟ್ಟಿದಾಗಿದೆ.

ಆದರೆ ಎಲ್ಲಾ ಕವನಗಳನ್ನು ನಾನು ಕನಸಿನ ಬಾಲೆಗಾಗಿ ಬರೆದಿಲ್ಲ. ಒಬ್ಬಳು ಸಿಕ್ಕಿದ್ದಳು, ಅವಳೆ ನಾ ನೆನೆಸುತ್ತಿದ್ದ ಬೆಳದಿಂಗಳಬಾಲೆಅಂತ ಅಂದ್ಕೊಂಡ್ಡಿದ್ದೆ. ಅವಳಿಗೆ ಕವನ ತೋರಿಸೋದು ಬಿಡಿ,ನನ್ನ ಭಾವನೆಗಳನ್ನು ಅವಳೆದುರಿಗೆ ಸರಿಯಾಗಿ ಹೇಳೋದೂ ಸಾಧ್ಯಆಗಲಿಲ್ಲ.ಅವಳಿಗೆ ಅರ್ಥ ಮಾಡಿಸುವ ಪ್ರಯತ್ನ ನಾನು ಜಾಸ್ತಿ ಮಾದಲ್ಲಿಲ್ಲ ಯಾಕಂದ್ರೆ ಅವಳಿಗೆ ಕನ್ನಡ ಗೊತ್ತಿರಲಿಲ್ಲ :).

ಯಾಕೊ ಕನ್ನಡತಿಯಲ್ಲದ ಬಾಲೆ ಬೆಳದಿಂಗಳವಳಲ್ಲ ಅಂತ ಸುಮ್ಮನಾದೆ. ಆದರೆ ಒಂದು ಬಲವಾದ ಪ್ರಯತ್ನ ನಾನು ಮಾಡಲೇಇಲ್ಲ !
ಆಮೆಲೆ ನಿಟ್ಟಿನಲ್ಲಿ ನನ್ನ ಹುಡುಕಾಟ ನಿಂತು ಹೊಗಿತ್ತು.ಬೇರೆಲ್ಲೋ ಗಮನ ಹರಿದು ಹೋಗಿತ್ತು.

ಮತ್ತೆ ಸಿನೆಮಾ ನೋಡಿದಾಗ, ಇದೆಲ್ಲಾ ಮತ್ತೆ ನೆನಪಾಯಿತು. ನಾನಾಡದ ಮಾತು ಮತ್ತೋಮ್ಮೆ ನೆನಪಾಯಿತು. ಆದರೆ ಸಲನಾನು ಕಣ್ಣಿರಿಡಲಿಲ್ಲ. ಹದವಾಗಿ ನಕ್ಕು ಸುಮ್ಮನಾದೆ.ಏಕೆಂದರೆ ನನಗೆ ಗೊತ್ತಾಗಿತ್ತು ಕಾಲನ ಪೆಟ್ಟಿಗೆ ಕಲ್ಪನೆ ಕೂಡಾನಾಶವಾಗುವುದೆಂದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್ ಅನ್ನು ಹುಡುಕಿ