ಎಲ್ಲರ ಕನಸ ಕೊಂದು ಅಳುತಿರುವೆ ಯಾಕೆ ಮರುಳೆ
ಕಟುಕ ಮರುಕ ಪಡುವಂತಹ ಬದುಕ ಹಂಚಿದವಳೆ
ಕ್ಷಮೆ ಯಾಕೆ ನಿನಗೆ ಪಾಪ ಕೂಪದಲಿ ಮಿಂದ ಮೇಲೆ
ಬದುಕಿಗೆ ಹೊಣೆ ಯಾರ್ಯಾರೋ ಆದರೆ
ನೀ ಬದುಕುವುದು ಯಾಕೆ ಹೇಳೇ
ಸ್ವಂತಿಕೆ ಮರೆತ ಹೆಣ್ಣಿಗೆ ,ಸಿಹಿ ಕಳೆದುಕೊಂಡ ಹಣ್ಣಿಗೆ ವ್ಯತ್ಯಾಸ ಹೇಳೇ
ಕ್ಷಮೆ ಯಾಕೆ ನಿನಗೆ ಪಾಪ ಕೂಪದಲಿ ಮಿಂದ ಮೇಲೆ
ಸುಖವನು ಹುಡುಕ ಹೋರಾಟ ಮೂರ್ಖರಿಗೆ ಸಿಕ್ಕ ಸುಖ ಗೊತ್ತೇ ?
ಅವರು ಮೂರ್ಖರು ಎಂಬ ಸತ್ಯದ ಅರಿವು
ಅದಾದರೂ ಸಿಗಬಹುದು ನಿನಗೆ
ಕ್ಷಮೆ ಯಾಕೆ ನಿನಗೆ ಪಾಪ ಕೂಪದಲಿ ಮಿಂದ ಮೇಲೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ