ಏಪ್ರಿ 27, 2010

ದೇವರು ಬೇಕಾ ದೇವರು

ಇಲ್ಲ ಸಲ್ಲದ ಕೆಲಸವ ಮಾಡಿ
ಕಳ್ಳ ಹಣವನು ಕೂಡಿಡುವೆ

ಪಾಪ ಪ್ರಜ್ಞೆಯು ಕಾಡಲು ನಿನ್ನ
ದೇವಗೆ ಲಂಚ ನೀ ಕೊಡುವೆ

ತಿರುಪತಿ ಹುಂಡಿ ತುಂಬಿದ ಮೇಲು
ನಿನ್ನ ಪಾಪದ ಹೊರೆ ಮೇಲು

ದೇವರ ಹುಡುಕುತ
ಲಂಚವನೀಯಲು ಕಾತರದಿಂದ ಹೊರಟಿರುವೆ

ಪಾಪದ ಹಣವನು ಪಡೆದ ತಪ್ಪಿಗೆ
ದೇವರು ತಾನೂ ನೊಂದಿರುವ

ಅದಕ್ಕೆ ನೋಡೋ ಮಗನೆ ಈಗ
ಬಿಡದಿ ಭೂಪ ಹುಟ್ಟಿರುವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್ ಅನ್ನು ಹುಡುಕಿ