ಇಲ್ಲ ಸಲ್ಲದ ಕೆಲಸವ ಮಾಡಿ
ಕಳ್ಳ ಹಣವನು ಕೂಡಿಡುವೆ
ಪಾಪ ಪ್ರಜ್ಞೆಯು ಕಾಡಲು ನಿನ್ನ
ದೇವಗೆ ಲಂಚ ನೀ ಕೊಡುವೆ
ತಿರುಪತಿ ಹುಂಡಿ ತುಂಬಿದ ಮೇಲು
ನಿನ್ನ ಪಾಪದ ಹೊರೆ ಮೇಲು
ದೇವರ ಹುಡುಕುತ
ಲಂಚವನೀಯಲು ಕಾತರದಿಂದ ಹೊರಟಿರುವೆ
ಪಾಪದ ಹಣವನು ಪಡೆದ ತಪ್ಪಿಗೆ
ದೇವರು ತಾನೂ ನೊಂದಿರುವ
ಅದಕ್ಕೆ ನೋಡೋ ಮಗನೆ ಈಗ
ಬಿಡದಿ ಭೂಪ ಹುಟ್ಟಿರುವ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ