ಗೌಡ ನಾಟಕದವರಿಗೆ ಹಣ ಕೊಟ್ಟು ಊರೊಳಗೆ ನಾಟಕ ಆಡಿಸೋದು ಯಾಕೆ ?
ಬಯಲಾಟದ ಪಾತ್ರಧಾರಿ ಮೇಸ್ಟ್ರಿಗೆ ಹಣ ಕೊಟ್ಟು ಕುಣಿಯೋದು ಯಾಕೆ ?
ದಸರಾದಲ್ಲಿ ಮಹಾರಾಜ ಕುಸ್ತಿ ಆಡಿಸಿದ್ದು ಯಾಕೆ ?
ಅದೆಲ್ಲ ಕೇವಲ ಮನೋರಂಜನೆ ಮಾತ್ರ. ದಣಿದ ಮನಕೆ ಉಲ್ಲಾಸ ನೀಡಲು ಹುಟ್ಟಿದ ಹವ್ಯಾಸಗಳು ಅವು. ಆ ಹವ್ಯಾಸಗಳನ್ನುಬದುಕಾಗಿಸಿಕೊಂಡ ಕಲಾವಿದರು ವೃತ್ತಿಪರ entertainers.
ಅವರಿಗೆಲ್ಲ ಆ ವಿಷಯ ಚೆನ್ನಾಗಿ ಗೊತ್ತಿತ್ತು. ಮತ್ತು ಜನ ಕೂಡ ಈ ಸತ್ಯವನ್ನು ಅರಿತುಕೊಂಡಿದ್ದರು.
ಜನ ಆಗ ಮುಗ್ಧರಾಗಿದ್ದರು ,ಮೂಡರಲ್ಲ. ಅವರು ಈ ಮನೋರಂಜನೆಯನ್ನ ಬದುಕಿನ ಭಾಗವಾಗಿ ನೋಡಿದರು, ಅದಕಾಗಿಬದುಕನ್ನೇ ಮರೆಯಲಿಲ್ಲ.
ಈಗ ಏನಾಗಿದೆ ?
ಜನರಲ್ಲಿ ಅಭಿವೃದ್ದಿಯ ಜೊತೆಗೆ ಬೌದ್ದಿಕ ಬಡತನ ಬಂದಿದೆ.
ಸಿನೆಮಾ ನೋಡಿ ನೋಡಿ ದಣಿಯುವುದು, ಕ್ರಿಕೆಟ್ ನೋಡಿ ನೋಡಿ ದಣಿಯುವುದು ಬದುಕು ಮುಗಿಯೋ ಹೊತ್ತಿಗೆ ನಾನೇನುಮಾಡಿದೆ ಅಂತ ಕೇಳಿ ಸಾಯೋದು .
ಬ್ಲಾಕ್ ಮನಿ ಯನ್ನು ವೈಟ್ ಮಾಡಲು ಸುವರ್ಗಳನ್ನ ಹಾಕ್ಕೊಂಡು ಸಿನಿಮಾ ಮಾಡೋರು , ಹುಚ್ಚ ಮುಂಡೆ ಮದ್ವ್ಯಗೆ ಉಂಡಲೆಕ್ಕದಾಗೆ ಆಡಿ ಬುಕ್ಕಿ ಗಳ ಸೆಗಣಿ ತಿನ್ನೋರು, ಇವರೆಲ್ಲರ ಹಿಂದೆ ಹೋಗೋ ಮೂಡ ಜನ , ಇವರೆಲ್ಲರಿಗಿಂತಲೂ ಹೆಚ್ಚಾಗಿ ಜನಸಾಮಾನ್ಯರನ್ನ ಖದಿಮರ ಸೆಳೆತಕ್ಕೆ ಸಿಲುಕಿಸಿ pimp ಗಳಂತೆ ಕೆಲಸ ಮಾಡುತ್ತಿರುವ ಮಾಧ್ಯಮದವರು ಇರುವವರೆಗೆ
ಯಾರು ನಿನ್ನ ಹೀರೋ ಹೇಳೋ ಮಗು ??
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ