ಮೇ 6, 2010

24 X 7 ನ್ಯೂಸ್ ಚಾನೆಲ್ಲುಗಳ ದೊಂಬರಾಟ

ಬೇಡಲು ಬರ್ತಿದ್ದ ದೊಂಬರಿಗೆ ಬರುತ್ತಿದ್ದದ್ದು ಒಂದೇ ಒಂದು ನಾಟಕ , ಅದು ಶ್ರೀ ರಾಮಾಯಣ.
ಮುಖಕ್ಕೆ ನೀಲಿ ಬಣ್ಣ ಹಾಕಿಕೊಂಡ ರಾಮ , ಬಾಲವಿದ್ದ ಹನುಮಂತ ,ಸೀತೆ.
ಒಂದು ಹಾರ್ಮೋನಿಯಂ ಮತ್ತು ರಾಮನ ಅವತಾರ , ರಘುಕುಲ ಸೋಮನ ಅವತಾರ ಹಾಡಿನ ಒಂದು ಪ್ಯಾರ ಇಷ್ಟರಲ್ಲೆ  ದೊಂಬರ ಬದುಕು.

ಅದೇ ಹಾಡನ್ನ ಊರಿನ ಮನೆ ಮನೆಗೂ ಹೋಗಿ , ಹಾಡುತ್ತಿದ್ದ ದೊಂಬರು ಬೇಡಲು ಬರುತ್ತಿದ್ದದ್ದು ವರ್ಷಕ್ಕೆ ಒಂದೇ ಸಾರಿ , ಹಾಗಾಗಿಅದೇ ಹಾಡು ಯಾರಿಗೂ ಬೇಸರ ತರುತ್ತಿರಲ್ಲಿಲ್ಲ , ಊರೂರು ತಿರುಗಿ ಬದುಕುತ್ತಿದ್ದ ದೊಂಬರಿಗೆ  ಎರಡನೇ ಹಾಡಿನ ಅವಶ್ಯಕತೆಇರಲ್ಲಿಲ್ಲ .
ಇತ್ತೀಚಿಗೆ ಬಹುಶಃ
ದೊಂಬರು ಕೂಡ ಬದುಕಲು ಬೇರೆ ಮಾರ್ಗಗಳನ್ನ ಹುಡುಕಿಕೊಂಡಿದ್ದಾರೆ.

ಈಗ ಹೊಸ ತರಹದ ದೊಂಬರು ಬಂದಿದ್ದಾರೆ . ಸಾಮಾಜಿಕ ಜವಾಬ್ದಾರಿ ಇದೆ ಎಂದು ಬೀಗುವ , ಸಾಕಷ್ಟು ಶಕ್ತಿವಂತರಾಗಿರುವ,ಎಲ್ಲರ ಮನೆಯಲ್ಲೂ ಒಂದೇ ಸಾರಿ ಹಾಡಬಲ್ಲ , ಸಾಕಷ್ಟು ವಿದ್ಯಾವಂತರಾಗಿರುವ , ವಿಚಾರವಂತರೆಂಬ ಹುಸಿ ನಂಬಿಕೆಯ ಮೂಡ ಜನ. ಯಾರು ಗೊತ್ತಾಯ್ತ 24 X 7 ನ್ಯೂಸ್ ಚಾನೆಲ್ಲುಗಳು , ಹಾಡಿದ್ದೆ ಹಾಡೋ ಕಿಸಬಾಯಿ ದಾಸರು .

ದುರಂತ ಅಂದರೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ
ದೊಂಬರು ಇವರು .

ಇತ್ತೀಚಿಗೆ breaking news ಅಂತ ಇವರು ತೋರಿಸಿದ headline gotta ?
karnataka rape case CID to probe ಇದು ನ್ಯಾಷನಲ್ ಲೆವೆಲ್ ದೊಂಬರ ಕತೆ .
ಏನಪ್ಪಾ ಕರ್ನಾಟಕ rape ಅಂದ್ರೆ ?, ರಾಮಾಯಣದ ಹಾಡು ದೊಂಬರು ತಪ್ಪು ಹಾಡಿದರೆ ಪರವಾಗಿಲ್ಲ , ಈ ವಿದ್ಯಾವಂತರು ಹೇಳೋ ಸ್ಪಷ್ಟತೆ ಹೇಗಿದೆ ನೋಡಿ ?

ಇಪ್ಪತ್ನಾಲಕ್ಕು ಗಂಟೆ ಸಮಾಚಾರ ಹೇಳ್ತಿವಿ ಅಂತ ಬೊಗಳೆ ಬಿಡೋ ಇವರತ್ರ ಇರೋ ಸಮಾಚಾರದ ಯೋಗ್ಯತೆ ಏನು ಅಂತ , ಇವ್ರು ಪದೇ ಪದೇ ತೋರಿಸೋ ವೀಡಿಯೊ ಕ್ಲಿಪ್ಪುಗಳು , ಸಿನಿಮ ನಟರ ಸುದ್ದಿ ಹೇಳೋವಾಗ ಬರುವ ಮಾದಕ ದೃಶ್ಯಾವಳಿ , ಅಷ್ಟೇ ಯಾಕೆ ಮೊನ್ನೆ ಸಾನಿಯಾ ಮದುವೆ ಟೈಮಲ್ಲಿ ಇವರು ತೋರಿಸಿದ ಅವಳ ಅರೆ ಬಟ್ಟೆ ಫೋಟೋ ಗಳು ಸಾರಿ ,ಸಾರಿ ಹೇಳುತ್ತವೆ.

ಇವರು ಸಮಾಚಾರದ ಹೆಸರಲ್ಲಿ ಮಾರುತ್ತಿರುವುದು 24 X 7 ಮಸಾಲ . ಇತ್ತೀಚಿಗೆ ಈ ಸಾಮಾಜಿಕ ಕಳಕಳಿಯ ಕಳ್ಳರು ಸರ್ಕಾರದ ಭವಿಷ್ಯವನ್ನು ಕೇಳಲಿಕ್ಕೆ ಶುರು ಮಾಡಿದ್ದಾರೆ. ಮಂತ್ರಿಗಳಾಡೋ ಜಗಳಕ್ಕೆ , ಸರ್ಕಾರದ ಗ್ರಹ ಗತಿ ಕಾರಣ , ಕರ್ನಾಟಕ ದ ಜನ ಇನ್ನ ಕುಂಡಲಿ , ಸಮಯ ನೋಡಿ ಓಟು ಹಾಕಬೇಕು. ವಿದ್ಯಾವಂತ , ಪ್ರಜ್ಞಾವಂತರು  ಜನಕ್ಕೆ ಸಮಾಚಾರದಲ್ಲಿ ತೋರಿಸಿತ್ತಿರುವುದು , ರಾಹು , ಕೇತು ಗಳ ಪೋಷಿಷನ್ನು .

ಛಿ , ಥೂ!! ,
ಛಿ , ಥೂ!!





1 ಕಾಮೆಂಟ್‌:

ಈ ಬ್ಲಾಗ್ ಅನ್ನು ಹುಡುಕಿ