ಮೇ 30, 2010

ದೊಂಬರು ಬಂದರು ದೊಂಬರು

ನಿನ್ನೆ ಬಂಗಾರಿ ೨೪ * ೭ ನ್ಯೂಸ್ ಚಾನೆಲ್ಲಿನ ಎಕ್ಷ್ಕ್ಲುಸಿವ್ ನ್ಯೂಸ್ ಏನಪ್ಪಾ ಅಂದ್ರೆ , ಅಲ್ಲಿ ದುರ್ಗದಲ್ಲಿ ಯಾವನೋ ಕುಡುದು ಮರ ಹತ್ತಿದ್ದನಂತೆ , ಸುಮಾರು ಹೊತ್ತು ಕಷ್ಟ ಪಟ್ಟು ಜನ ಅವನನ್ನ ಕೆಳಗೆ ಇಳ್ಸಿದ್ರಂತೆ, ಸ್ವಲ್ಪ ಹೊತ್ತಾದ ಮೇಲೆ ಅವನು ನೀರಿನ ಟ್ಯಾಂಕ್ ಮೇಲೆ ಹೋಗಿ ಕೂತ್ಕಂಡ್ನಂತೆ, ಅವನನ್ನ ಪೊಲೀಸರು ಜನಗಳು ಕಷ್ಟ ಪಟ್ಟು , ಹರ ಸಾಹಸ ಮಾಡಿ ಕೆಳಗೆ ಇಳಿಸಿದರಂತೆ .

ಅಲಾಲಲ ಸಿಂಗ್ರಿ, ಅವನ ಜೊತೆಗೆ ನೀನು ಕೂತ್ಕಂಡು ಪೆಗ್ಗ್ ಹಾಕಿತಿದ್ದ್ಯ ಮಗಾ , ಅದ್ಯಾವ ಸೀಮೆ ಕಳ್ಳಬಟ್ಟಿಸಾರಾಯಿ ಕುಡಿದಿಯೋ, ನಿನ್ನ ಗೆಳೆಯ ಗಿಡ ಹತ್ತಿದ್ದು ಕ್ಯಾಮೆರದಾಗ ಹಿಡ್ಕೊಂಡು ದೊಡ್ಡ ನ್ಯೂಸ್ ಅನ್ನಂಗೆ ತೋರಿಸಿ ಬಿಟ್ಟೆ , ಅಲಾಲ ಸಿಂಗ್ರಿ , ನಿಮ್ಮು ರೀಡರ್ ಪ್ರಶ್ನೆ ಮೇಲೆ ಪ್ರಶ್ನೆ , ಇದು ಎಸ್ತೋತ್ತಿಗಾಯ್ತು , ಎಂಗಾಯ್ತು , ಜನ ಎನ್ಮಾಡ್ತಿದ್ದರೆ ಕೇಳಿದ್ದೆ , ಕೇಳಿದ್ದು .... ಸಿಂಗ್ರಿ .. ಸಿಂಗ್ರಿ ಕಿಸ್ಕಂಡು,ಕಿಸ್ಕಂಡು ಹೇಳಿದ್ದೆ .. ಹೇಳಿದ್ದು

ಸಿಂಗ್ರಿ ಕಡಿಮೆ ಕುಡಿ ಕಣ್ಲಾ, ನೀರಿನ ಟ್ಯಾಂಕ್ ಹತ್ತಿದರೆ ಕೆಳಗೆ ಇಳಸಬಹುದು, ನ್ಯೂಸ್ ನ ಚಟ್ಟ ಹತ್ತಿಸ್ದ್ರೆ ಇಳ್ಸಾಕಾಗಕಿಲ್ಲ . ಸುವರ್ಣ ಅಂದ್ರೆ ಬಂಗಾರ ಕಣ್ಲಾ , ಸುವರ್ naa ಅಂತ ಅಲ್ಲ ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್ ಅನ್ನು ಹುಡುಕಿ