ಜುಲೈ 3, 2008

ಸ್ಲ್ಯಾಮ್ ಬುಕ್ ಎಂಬ ಒಂದು ವಕ್ತಾರ

ಮತ್ತೆ ನನ್ನ ಸ್ಲ್ಯಾಮ್ ಬುಕ್ ತೆಗೆದು ಓದುತ್ತಿದ್ದೆ, ಕಾಲೇಜಿನ ನೆನಪುಗಳು,ಕಾಲೇಜಿನ ಹುಡುಗಿಯರು,ಮತ್ತೆ ಮಾಸ್ತರರು ನೆನಪಾಗುತ್ತಿದ್ದಾರೆ.
ಹಾಸ್ಟೆಲ್ನಲ್ಲಿ ತುಂಬಾ ಹತ್ತಿರವಾಗಿದ್ದ ಕೆಲ ಗೆಳೆಯರ ನೆನಪು ಈಗ ನನ್ನಪ್ಪ ಆಗ ನನಗೆ ಕೊಟ್ಟಿದ್ದ ಒಂದು ಡೈರಿಯ ಮತ್ತೊಂದು ಹಾಳೆ ಮಾತ್ರ.

ಅದ್ರುಷ್ಟ ಇಲ್ಲೂ ನನ್ನ ಜೊತೆಗಿದೆ,ತುಂಬಾ ಗೆಳೆಯರು ಈಗಲೂ ಬಳಿಯಲ್ಲಿಯೆ ಇದ್ದಾರೆ.ಆದರೆ ಮರೆಯಾದವರು ಮಾತ್ರ ಡೈರಿಯ ಹಾಳೆ.
ನನಗೆ ಚೆನ್ನಾಗಿ ನೆನಪಿದೆ,ಸ್ಲ್ಯಾಮ್ ಬುಕ್ ತೆಗೆದುಕೊಂಡು ಕಾಲೇಜಿನ ಕೊನೆ ದಿನಗಳಲ್ಲಿ ಓಡಾಡುತ್ತಿದ್ದಾಗ ನಾ ಮಾಡುತ್ತಿದ್ದದ್ದು ನನ್ನ ಮರೆವನ್ನು ಮೆಟ್ಟಬೇಕೆನ್ನುವ್ವ ವಿಚಿತ್ರ ಹಟ.ಈ ಹಟದಲ್ಲಿ ನಾನು ನಾಲ್ಕು ವರ್ಷಗಳಲ್ಲಿ ನಾಲ್ಕು ಬಾರಿಯು ನೆಟ್ಟಗೆ ಮಾತನಾಡದವರ ಬಳಿಗೆ ಕೂಡ ಹೋದೆ.

ಇನ್ನೋಂದು hidden agenda ಇತ್ತು. ಬಹಳ ಸಲ ಗುಮ್ಮನಂತೆ ತೆಪ್ಪಗಿದ್ದ ನನ್ನ ಬಗ್ಗೆ ಮಿಕ್ಕಿದವರು ಏನು ಯೋಚನೆ ಮಾಡ್ತಿದ್ದಾರೆ ಅಂತ ನನಗೆ ಗೊತ್ತಾಗಬೇಕಿತ್ತು. ನನ್ನದೆ ಆದ ಗುಂಪಿನಲ್ಲಿ ನಾನು ಗುಮ್ಮನಿರಲಿಲ್ಲ,ಹಂಗತ ಉಳಿದವರಲ್ಲಿ ನಾನೇನು ತೆಪ್ಪಗಿರುವ ನಾಟಕವಾದಲ್ಲಿಲ್ಲ ಮತ್ತು ನನಗೆ ದೊಡ್ಡ ನಿರಾಸಕ್ತಿಯೇನು ಇರಲ್ಲಿಲ್ಲ, ಯಾಕೊ ನಾನು ಕಾಲೇಜಿಗೂ ನೆಟ್ಟಗೆ ಹೋಗಲ್ಲಿಲ್ಲ.ಮತ್ತೆ ನನ್ನ ಸ್ಲ್ಯಾಮ್ ಬುಕ್ ನಲ್ಲಿ ಯಾವ ಮಾಸ್ತರನು ಇಲ್ಲ.ಎಲ್ಲರೂ ನೆನಪಿದ್ದಾರೆ!!!!

ಮತ್ತೆ ಮರೆಯಾದ ಗೆಳೆಯರಿದ್ದಾರಲ್ಲಾ,ಅವ್ರು ಈವರೆಗು ಸಿಕ್ಕಿಲ್ಲ.ಬದುಕಿನ ಗಿಡಕ್ಕಿರುವ ಸಾವಿರಾರು ಕವಲುಗಳ ಎಲ್ಲಾ ಕೊನೆಗಳನ್ನು ನೋಡುವುದು ಅಸಾಧ್ಯ.ಕೊಂಬೆ ದೊಡ್ಡದಾಗಿದೆ ಅನ್ನೋ ಸಮಾಧಾನ.

ಅಲ್ಲಿಗೆ ನನ್ನ ಮರೆವು ಕೆವಲ ಪೆನ್ನು,ಪುಸ್ತಕ,ಮೊಬೈಲ್ಗೆ ಮಾತ್ರ ಸೀಮಿತ.ಮನುಷ್ಯರನ್ನೆ ಮರೆವಷ್ಟು ಮೂರ್ಖತನ ನನಗಿಲ್ಲ. ಆದರೆ ಸ್ಲ್ಯಾಮ್ ಬುಕ್ನಿಂದ ಓಂದು ಉಪಯೋಗ ಆಗಿದೆ.ಕಿಶೋರ್ ಕುಮಾರ್ನ ಹಾಡಿದೆಯಲ್ಲಾ,


ಆತೆ ಜಾತೆ ಖೂಬಸೂರತ್ ಆವಾರ ಸಡಕೋಂಪೆ,
ಕಭಿ ಕಭಿ ಇತ್ತಫಾಕ್ ಸೆ...............
ಉನ್ಮೆಸೆ ಕುಚ್ ಲೋಗ್ ಭೂಲ್ ಜಾತೆ ಹೈ, ಅವ್ರು ಹಾಳೆಯಾಗಿದ್ದಾರೆ.ಹಾಳೆಯಾಗಿ ನೆನಪಿದ್ದಾರೆ.

ಮತ್ತೋಂದು ಬಹಳ ಓಳ್ಳೆ ಉಪಯೋಗವಾಗಿದೆ.ಸ್ಲ್ಯಾಮ್ ಬುಕ್ ಬರೆದ ಹುಡಿಗಿಯೊಬ್ಬಳ ಅಂದವಾದ ಬರವಣಿಗೆ ನನ್ನಲ್ಲಿ ಬಹಳ ಮಧುರವಾದ ಭಾವನೆಯೊಂದನ್ನ ತಂದಿತ್ತು.ಬರವಣಿಗೆ ಶಿಸ್ತಿನ ಲಕ್ಷಣವೆಂದು ನಂಬಿದ್ದು ಮತ್ತೋಂದು ಕಾರಣವಾಗಿತ್ತು, ಹೆಚ್ಹೂ ಕಮ್ಮಿ ಅಲ್ಲಿಗೆ ಮುಗಿತು.
ಮತ್ತೆ ಸ್ಲ್ಯಾಮ್ ಬುಕ್ ಓದಿದೆ ಮತ್ತೆ ನೆನಪಾದಳು,ಬುಕ್ ಮುಚ್ಚಿದಾಗ ಮರೆಯಾದಳು :).

ಜೂನ್ 21, 2008

ಆತ್ಮದ ಕತೆ ಓದಿದ ನಂತರ ನಕ್ಕಿದ್ದು

ಇವತ್ತು ಬೆಳಿಗ್ಗೆಯಿಂದ ಸುಮ್ಮನೆ ಮನೆಯಲ್ಲಿ ಕುಳಿತಿದ್ದೆ. ಯಾಕೊ ನಾ ದಿನಾ ಮಾಡುತ್ತಿದ್ದ ಕೆಲಸಗಳೆಲ್ಲಾ ಬೇಸರ ತಂದಿದ್ದವು.
ಮಧ್ಯಾಹ್ನ ಈಟಿವಿಯಲ್ಲಿ ಆ ದಿನಗಳು ಸಿನೆಮಾ ಬರುತ್ತೆ ಅಂತ ಗೊತ್ತಾಗಿ ಸಿನಿಮಾಕ್ಕೊಸ್ಕರಾನೆ ಕಾಯ್ತಿದ್ದೆ.

ಪ್ರತಿಯೊಂದು ಅಡ್ವಟೈಸನ್ನೂ ಯಮಯಾತನೆ ತರಹ ಅನುಭವಿಸಿದ್ದಾಯ್ತು. ಇನ್ನೆನು ೪:೩೦ ಗೆ ಸಿನೆಮಾ ೪:೨೦ ಕ್ಕೆ ಕರೆಂಟು ಹೊಯ್ತು.
ಈ ಮುಂಚೆ ಯಾವತ್ತೂ ೫ ನಿಮಿಶಕ್ಕಿಂತ ಜಾಸ್ತಿ ಕರೆಂಟು ಹೊಗಿದ್ದು ಇಲ್ಲ. ಆದ್ರೆ ಇವತ್ತು ೬:೦೦ ಗಂಟೆವರ್ಗೂ ಕರೆಂಟು ಬರ್ಲಿಲ್ಲ.ಮಲಗಿಕೊಂಡೆ.

ಎದ್ದ ಮೇಲೆ ಸ್ವಲ್ಪ ಸುಮ್ಮ್ನೆ ಸ್ವಲ್ಪೊತ್ತು ಕೂತ್ಕೊಂಡು ಧ್ಯಾನ ಮಾಡೋ ಪ್ರಯತ್ನ ಮಾಡಿದೆ.ಯಾಕೊ ಮನ್ಸ್ಸಾಲಿಲ್ಲ.
ಆಮೇಲೆ ಕೈಗೆ ಸಿಕ್ಕ ಬ್ಲೊಗ್ ಗಳನ್ನು ಓದುತ್ತಿದ್ದೆ.ಬಹಳಷ್ಟು ಬ್ಲೊಗ್ ಗಳು ಆಧ್ಯಾತ್ಮದ ಕತೆ ಹೇಳುತ್ತಿದ್ದವು.

who will cry when i die ಅಂತ ಮುಂಬಯಿಯ ಚಿಕ್ಕ ಹುಡುಗಿ ಬರೆದ ಕವನ ಓದಿ ವಿಚಿತ್ರ ಅನ್ನಿಸಿತು. ಆತ್ಮ ಮತ್ತು ದೇಹದ ಕಲ್ಪನೆಯನ್ನ ಅರಗಿಸಿಕೊಳ್ಳುವುದು ಆಗಲಿಲ್ಲ.ಸತ್ತ ಮೇಲೆ ಆತ್ಮ ಕ್ಕೆ ಮತ್ತೆ ಹೊಸ ಜೀವ ಅಂತ ಬರೆದ ಕಲ್ಪನೆಯ ಬಗ್ಗೆ ನಗು ಬಂತು.
ಆತ್ಮದ ಅರಿವು ನಮಗೆ ಬರಬಹುದಾದರೆ ಅದಕ್ಕೆ ನಮ್ಮ ಅರಿವಿದೆಯೆ ?

ನನಗೆನೋ ಸತ್ತ ಮೇಲೆ ಬದುಕೋ ಯೋಚನೆ ಮಾಡೊ ಜನರ ಬಗ್ಗೆ ವಿಚಿತ್ರ ನಿರಾಸಕ್ತಿ. ವಿಷಯ ನನ್ನ ಅಭಿಪ್ರಾಯ ಹೊರತು ಆ ಹುಡುಗಿಯ ಕವನದ ಬಗೆಗಿನ ಯಾವುದೇ ರೀತಿಯ ವಿಮರ್ಶೆಯಲ್ಲ. ನನಗೆ ಆಶ್ಚರ್ಯವಾಗಿದ್ದು ಆ ಹುಡುಗಿಯ ವಯಸ್ಸು ಮತ್ತು ಕವನದ ನಡುವಿನ ಅಂತರ.

ನಾನ್ಯಾವತ್ತು ೨೦ ಮುಟ್ಟದ ಹುಡುಗ ಹುಡುಗಿ ಆತ್ಮ ಮತ್ತು ದೇಹದ ಬಗ್ಗೆ ಮಾತಾಡಿದ್ದನ್ನ ನೋಡಿರಲಿಲ್ಲ. ಅಷ್ಟೇ ಏಕೆ ಈಗಲೂ ನನ್ನಲ್ಲಿ ಬದುಕಿನ ಬಗ್ಗೆ ನಿರ್ದಿಷ್ಟ ಅಭಿಪ್ರಾಯ ಇಲ್ಲ.

ಯಾವುದು ಪ್ರೀತಿ,
ಯಾವುದು ನೀತಿ,
ಬದುಕಿಗೆ ಬಂದ್ದದ್ದೇ ಸೊಗಸು.

ಸಂಪೂರ್ಣವಾಗಿ ಸಮಯದ ಗುಲಾಮಗಿರಿ.ನಾನು ನನಗೆ ಅಂತ ಇಟ್ಟು ಕೊಂಡಿರುವ ಕನಸುಗಳಲ್ಲಿ, ಬದುಕನ್ನ ಸಲೀಸಾಗಿಸುವುದಿದೆಯೆ ಹೊರತು ,
ನನ್ನ ಬದುಕಿನ ಅರ್ಥ,ಕಾರಣ,ಗುರಿ ಅಂತಾ ನಾನು ಯೋಚನೆ ಮಾಡೋದು ನಿಲ್ಲಿಸಿಯಾಗಿದೆ.

ನಾನು ಹುಡುಕಲು ಪ್ರಯತ್ನ ಮಾಡಿದಾಗಲೆಲ್ಲ ನನಗೆ ದೊರೆತ ಸಮಾಧಾನಕರ ಉತ್ತರ ಬದುಕುವುದು, ಮತ್ತು ನಮ್ಮಷ್ಟಕ್ಕೆ ನಾವೆ ಬದುಕುವುದು ಅಂತ.
ಸಮಾಜ ಸೇವೆ ಅಂತ ಭಾಷಣ ಮಾಡೋ ಜನ ಸಿಕ್ಕಾಗೆಲ್ಲಾ,ಅವರಿಗಾಗಿ ಅದನ್ನ ಇವರಿಗಾಗಿ ಇದನ್ನ ಮಾಡ್ಬೇಕು ಅಂತ ಮಾತು ಕೇಳಿದಾಗಲೆಲ್ಲಾ
"ರಾಮ ಹುಟ್ಟಿದ್ದು ಕೊಲ್ಲೋಕೆ
"ಆದ್ರೆ ರಾವಣ ಹುಟ್ಟಿದ್ದು ಕೊಲ್ಲಿಸ್ಕೋಳ್ಳೋಕಾ ?.
ರಾಮ ಹುಟ್ಟಿದ್ದಕ್ಕೆ ಕಾರಣ ಹೇಳೋ ಜನ ಅಂತ ಅನ್ನಿಸುತ್ತೆ. ಬದುಕನ್ನ ನಮ್ಮಷ್ಟಕ್ಕೆ ನಾವೇ ಬದುಕುವುದೆ ಬದುಕಿನ ಗುರಿ. ಹಂಗಂತ ರಾಮಾಯಣದ ಮತ್ತು ರಾಮ ತಪ್ಪಂತ ಅಲ್ಲ, ರಾವಣ ಸೀತೆಯನ್ನ ಕದ್ದ, ರಾಮ ರಾವಣನ್ನ ಕೊಂದ.
ಸಮಾಜ ಸೇವೆ ಅನ್ನೋದು ನನ್ನ ಮಟ್ಟಿಗೆ ನಾನು ನಿಷ್ಟೆಯಿಂದ ಬದುಕುವುದರ ಉಪ ಉತ್ಪನ್ನ"(by product)".

ಜೂನ್ 14, 2008

ನೆನಪಾಗಿ ಕಾಡುತ್ತಿರುವ ಆಡದ ಮಾತುಗಳು ಮತ್ತು ಬೆಳದಿಂಗಳ ಬಾಲೆ

ಮತ್ತೆ ಬೆಳದಿಂಗಳ ಬಾಲೆ ಸಿನೆಮಾ ನೋಡಿದೆ. ಮೊದಲಿನಂತೆ ಸಲ ಕೂಡ ಬಹಳ ಚೆನ್ನಾಗಿದೆ ಅನ್ನಿಸಿತು.
ಅನಂತ್ನಾಗ್ ಬೊಂಬಟ್ ಅಭಿನಯ , ಸುಮನ್ ನಗರ್ಕರ್ ಮುದ್ದು ಮುಖ,ಸುನಿಲ್ ಕುಮಾರ್ ದೆಸಾಯಿಯವರ ಒಳ್ಳೆನಿರ್ದೇಶನ ಎಂಥವರನ್ನು ಮರುಳುಮಾಡಬಲ್ಲ ಕತೆ.

ಮೊದಲನೆ ಸಲ ಸಿನೆಮಾ ನೋಡಿದಾಗ ಕೊನೆಗೆ ಕಣ್ಣೀರಿಟ್ಟಿದ್ದೆ.ನನ್ನ ಬೆಳದಿಂಗಳ ಬಾಲೆ ನನ್ನ ಕೈತಪ್ಪದಿರುವಂತೆಎಚ್ಚರಿಕೆಯಿಂದಿರಬೇಕು ಅಂತ ನಿರ್ಧಾರ ಕೂಡಾ ಮಾಡಿದ್ದೆ. ಆದರೆ ನಾನು ತುಂಬಾ ಚಿಕ್ಕವನಾಗಿದ್ದೆ ಆಗ ನನಗೆ ಅಂಥಾ ಬಾಲೆಯಸ್ವಂತದ ಒಂದು ಸಣ್ಣ ಕಲ್ಪನೆಯೂ ಇರಲ್ಲಿಲ್ಲ.
ಆದರೆ ಸಿನೆಮಾ ನೋಡಿ ಒಬ್ಬ ಬಾಲೆ ಇರಲೇಬೇಕು ಅನ್ನೊ ಸತ್ಯ ಅಷ್ಟೋ ಇಷ್ಟೊ ಗೊತ್ತಾಗಿತ್ತು.

ಬೆಲದಿಂಗಳಬಾಲೆಯ ಹುರುಪಿನಲ್ಲೆ ನನ್ನವಳಲಲ್ಲದ ನನ್ನವಳಿಗಾಗಿ ಪತ್ರ ಮತ್ತು ಕವನಗಳನ್ನ ಬರೆಯಲು ಶುರು ಮಾಡಿದೆ. ಪತ್ರಬರೆಯಲು ಕುಳಿತಾಗ ಶಬ್ದಗಳಿಗಾಗಿ ತಡಕಾಡಿದೆ,ಹೇಗೆ ಶುರು ಮಾಡಬೇಕು ಅಂತ ಗೊತ್ತಾಗದೆ ನರಳಿದೆ.ಸುಮಾರು ಶಬ್ದಗಳನ್ನಬರೆದು ಕಾಗದ ಹರಿದು ಹಾಕಿದೆ!

ಹಾಗೋ ಹೀಗೋ ಕಷ್ಟಪಟ್ಟು ನನಗೆ ಸಮಾಧಾನವಾಗೊ ಹಾಗೆ ಬರೆದ ಮೇಲೆ ಮನೆಯಲ್ಲಿ ಯಾರಿಗೂ ಕಾಣದಂತೆ ಅದನ್ನ ಬಚ್ಚಿಟ್ಟುಕಾಪಾದಿದ್ದು ಆಯ್ತು. ಹಾಗೆ ನಾ ಬರೆದ ಕವನಗಳಲ್ಲಿ ಕೆಲವನ್ನು ಈಗಾಗಲೆ ತೆರೆದಿಟ್ಟಿದಾಗಿದೆ.

ಆದರೆ ಎಲ್ಲಾ ಕವನಗಳನ್ನು ನಾನು ಕನಸಿನ ಬಾಲೆಗಾಗಿ ಬರೆದಿಲ್ಲ. ಒಬ್ಬಳು ಸಿಕ್ಕಿದ್ದಳು, ಅವಳೆ ನಾ ನೆನೆಸುತ್ತಿದ್ದ ಬೆಳದಿಂಗಳಬಾಲೆಅಂತ ಅಂದ್ಕೊಂಡ್ಡಿದ್ದೆ. ಅವಳಿಗೆ ಕವನ ತೋರಿಸೋದು ಬಿಡಿ,ನನ್ನ ಭಾವನೆಗಳನ್ನು ಅವಳೆದುರಿಗೆ ಸರಿಯಾಗಿ ಹೇಳೋದೂ ಸಾಧ್ಯಆಗಲಿಲ್ಲ.ಅವಳಿಗೆ ಅರ್ಥ ಮಾಡಿಸುವ ಪ್ರಯತ್ನ ನಾನು ಜಾಸ್ತಿ ಮಾದಲ್ಲಿಲ್ಲ ಯಾಕಂದ್ರೆ ಅವಳಿಗೆ ಕನ್ನಡ ಗೊತ್ತಿರಲಿಲ್ಲ :).

ಯಾಕೊ ಕನ್ನಡತಿಯಲ್ಲದ ಬಾಲೆ ಬೆಳದಿಂಗಳವಳಲ್ಲ ಅಂತ ಸುಮ್ಮನಾದೆ. ಆದರೆ ಒಂದು ಬಲವಾದ ಪ್ರಯತ್ನ ನಾನು ಮಾಡಲೇಇಲ್ಲ !
ಆಮೆಲೆ ನಿಟ್ಟಿನಲ್ಲಿ ನನ್ನ ಹುಡುಕಾಟ ನಿಂತು ಹೊಗಿತ್ತು.ಬೇರೆಲ್ಲೋ ಗಮನ ಹರಿದು ಹೋಗಿತ್ತು.

ಮತ್ತೆ ಸಿನೆಮಾ ನೋಡಿದಾಗ, ಇದೆಲ್ಲಾ ಮತ್ತೆ ನೆನಪಾಯಿತು. ನಾನಾಡದ ಮಾತು ಮತ್ತೋಮ್ಮೆ ನೆನಪಾಯಿತು. ಆದರೆ ಸಲನಾನು ಕಣ್ಣಿರಿಡಲಿಲ್ಲ. ಹದವಾಗಿ ನಕ್ಕು ಸುಮ್ಮನಾದೆ.ಏಕೆಂದರೆ ನನಗೆ ಗೊತ್ತಾಗಿತ್ತು ಕಾಲನ ಪೆಟ್ಟಿಗೆ ಕಲ್ಪನೆ ಕೂಡಾನಾಶವಾಗುವುದೆಂದು.

ಜೂನ್ 11, 2008

ನನ್ನ ಕಲ್ಪನೆ ಎಲ್ಲೋ ನಿನ್ನ ಹುಡುಕಿ ಹೋಯ್ತು

ಕಣ್ಣಿಗೆ ಕಾಣದೆ ಸಂತಸ ತರುತ್ತಿರುವ ನಿನ್ನ ಕಲ್ಪನೆಗಳಿಗೆ ಸಾಟಿಯಾಗಬಲ್ಲೆಯಾ ನೀನು ?
ಸಾಟಿಯಾದರೆ ನೀ ನನ್ನ ಕಲ್ಪನೆಗೂ ಮೀರಿದ ಸಂತೋಷವೇ ?

ಮೇ 18, 2008

ನಾ ಬರೆದ ಕವನಗಳು -ನಿನಗಾಗಿ ೩

ಅರಿಕೆ:
ತಪ್ಪು-ಒಪ್ಪುಗಳ ಪರಿವೆಯಿಲ್ಲದ ನಿನ್ನ ಪ್ರೀತಿ
ಇಂದೆನ್ನ ಆತ್ಮಶಕ್ತಿ,
ಸ್ಪೂರ್ತಿಯ ಸೆಲೆ.

ಕಾಮನ ಕಣ್ಸೊಕಿ ಕೊಳೆಯಾಗಲು
ಬಿಡಬೇಡ ಗೆಳತಿ ನೀ ಇದನ್ನ
ನಿನ್ನ ಶ್ವೇತ ಮನದಿ ಬಚ್ಚಿಡು ನನ್ನ ಪ್ರೀತಿಯನ್ನ

ಜನ-ಜಂಗುಳಿಯಲಿ ಕಳೆಯದ ಪ್ರೀತಿ
ನೋವಿನಲು ಮರೆಯದ ಪ್ರೀತಿ
ಕಾಲನಿಗೂ ಸೋಲದ ಪ್ರೀತಿ ನನ್ನದು
............ಜೋಪಾನವಾಗಿದುವ ಹೊಣೆ ನಿನ್ನದು

ನಾ ಬರೆದ ಕವನಗಳು-ನಿನಗಾಗಿ ೨

ನಿನ್ನೋಲುಮೆ:
ನಿನ್ನೊಲವ ನಿರೀಕ್ಷೆ ,
ನನ್ನ ಬದುಕ ಬೆಳೆವಂತಹ ಸಾಧನ.
ನವಿಲೊಂದು ಮುಂಗಾರ ಮಳೆಗಾಗಿ ಕಾಯ್ವಂತೆ
ನಿನ್ನ ಕಾಯುತ್ತಿರುವ ಮನ ನನ್ನದು

ತಿಂಗಳ ಬೆಳಕಾಗಿ ಬಾ ನನ್ನ ಬಾಳಂಗಳಕ್ಕೆ
ನಗೆಯ ಹೂವಾಗಿ ಬಾ ನನ್ನ ಬಾಳ್ದೋಟಕ್ಕೆ
ಸ್ಪೂರ್ತಿ ಸೆಲೆಯಾಗಿ ಬಾ ನನ್ನ ಬಾಳ ಹೋರಾಟಕ್ಕೆ

ಗೆಲುವಿನಲಿ ನಗೆಯಾಗಿ
ಸೋಲಿನಲಿ ಜೊತೆಯಾಗಿ
ನಾನೆರುವ ಎತ್ತರಕ್ಕೆ ಏಣಿಯಾಗಿ
ನೀನಿರುವ ಜೀವನದ ನಿರೀಕ್ಷೆ ..............ನನ್ನ ಬದುಕ ಬೆಳೆವಂತಹ ಸಾಧನ.

ಮೇ 15, 2008

ಅರಮನೆ

ಇವತ್ತು ದಿವಾಕರ್ ನ ಮದುವೆಗೆ ನಾನು ಆತ್ಮ ಮತ್ತೆ ರಾಖಿ ಹೊಗಿದ್ವಿ. ಗೋಪಿ,ರವಿ,ಸೂರಿ,ಸತ್ಯ,ಇಮ್ತಿ,ಜಯ,ಸಿದ್ದ ಎಲ್ಲ ಬಂದಿದ್ರು.
ತರ್ಲೆ ಮಾಡ್ತಾ ಶ್ರೀಮಂತ ಮದುವೆಯ ಭಾರೀ ಭೋಜನ ಕಂಟ ಪೂರ್ತಿ ಇಳಿಸಿ ಸಿನೆಮಾ ನೋಡೊಕೆ ಫ಼ೋರಂಗೆ ಬಂದ್ವಿ.

ನಾನು,ವೇಣು,ಆತ್ಮ,ರಾಕಿ ಸಿನೆಮಾ ಕ್ಕೆ ಮಿಕ್ಕಿದೋರು ಮನೆಗೆ :).
ವೇಣು ಇದ್ರೆ ನಮ್ಗೆಲ್ಲಾ ಕನ್ನಡ ಸಿನೆಮ ಖಾತ್ರಿ,ಪಾಪ ಚೆನ್ನೈಲಿ ಇರ್ತಾನೆ ಅಂತಾ ಯಾರು ತಕರಾರು ಮಾಡ್ದೆ ಕನ್ನಡ ಸಿನೆಮಾ ನೊಡೋಕೆ ಒಪ್ಪ್ಕೊತಿವಿ.

ಹಂಗಂತ ಕನ್ನಡ ಸಿನೆಮಾ ಕೆಟ್ಟದು ಅಂತೆನು ಇಲ್ಲ,ಎನೇ ಆದ್ರು, ಸಾಯಿ,ಪಾಂಡ್ಯನ್,ಥ್ರಿಲ್ಲರ್, ಸಾಲದ್ದಕ್ಕೆ ಗುಲ್ಜಾರ್,ಬಸಂತ್ ಕುಮಾರ್ನ ಸಹಿಸಿಕೊಂಡ ತಳಿ ನಮ್ದು.

ಈಗೀಗ ಮುಂಗಾರು ಮಳೆ ನಂತರ ಉಸಿರಾಡ್ಕೊಂಡು ಕನ್ನಡ ಸಿನೆಮಾ ನೋಡ ಬಹುದು, (ಆ ದಿನಗಳು ಬಾಕಿ ಇದೆ).

ಅರಮನೆಗೆ ಹೋದ್ವಿ, ಶಂಕರ್ನಾಗ್ ರ ಅಣ್ಣ ಅನಂತು (ಯುವಕ), ಮತ್ತೆ ಗೊಲ್ದನ್ ಗಣೇಶ,ಸಿನೆಮಾ ಹಿಡಿಸ್ತು, ಮದ್ಯ ಸ್ವಲ್ಪ ಬೇಜಾರಾಗ್ತಿದೆ ಅನ್ನಿಸಿದರು ಆರೋಪ ಮಾಡೋಕೆ ಕೆಟ್ಟದ್ದು ಸಿನಿಮಾದಲ್ಲಿ ಇರ್ಲಿಲ್ಲ. ಖುಶಿಯಾಯ್ತು.

ಸಿನೆಮಾ ಮುಗಿಯೋ ಹೊತ್ತಿಗೆ ಕೊನೆ ಹಾಡಿಗೆ ನಗು ಬಂತು, ಪ್ಲೇ ಬ್ಯಾಕ್ ಸಿಂಗರ್ ಗುರುಕಿರಣ್ ಓಕೆ, ಸ್ಟೇಜ್ ಮ್ಯಾಲೆ ಯಾಕೆ ?
ಲೂಸ್ ಮಾದ ಹೀರೋ ಆದ್ರೆ ನೀನ್ಯಾಕೆ ಆಗ್ಬಾರ್ದು, ಅದು ಆಗೆ ಬಿಡ್ಲಿ,

ನಾನು ನೋಡೊದಿಲ್ಲಪ್ಪ ರೂಡಿ ತಪ್ಪಿದೆ,ಸಹನೆ ಮೊದ್ಲಿನಂತೆ ಇಲ್ಲ.!!!!!

ಗಣೇಶ ತುಂಬಾ ಖುಶಿ ಕೊಟ್ಟ, ನಾಯಕಿಯ ತಂಗಿ ನಾಳೆಯ ನಾಯಕಿ ಅಂತ ನಾವೆಲ್ಲ ಪಿಟ್ಲು ಹಾಕಿದ್ದು ಆಯ್ತು.

ಆಮೆಲೆ ಒಂದು ಸಣ್ಣ ಅನುಮಾನ ಬಂತು, ಕಲ್ಲಿಗೆ ಸಂಕಟ ಬಂದ್ರೆ ಏನು ಮಾಡುತ್ತೆ ಅಂತ?, ಅರಮನೆ ಗಣೆಶನ್ನ ನೆನಸಿಕೊಂಡು ಸುಮ್ಮನಾಗುತ್ತೆ.

ಇಂತಿ ಒಂದು ಗುರುವಾರಕ್ಕೆ ಅವಾಂತರಗಳ ಸಮೇತ ಮಂಗಳ.

ಈ ಬ್ಲಾಗ್ ಅನ್ನು ಹುಡುಕಿ