ಬೀರ ಕಾಲೇಜಿನಲ್ಲಿದ್ದಾಗ ಒಂದು ಸಲ ಹೇಳಿದ್ದ , ಮನುಷ್ಯ ಕಂಡು ಹಿಡಿದ ಅತೀ ಕೆಟ್ಟ ವಸ್ತು ಅಣುಬಾಂಬ್ ಅಲ್ಲ , ಹಣ ಅಂತ.
ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆ ಬಿದ್ದೋರ ತುಳಿಯುತಲಿತ್ತು . ಕಾಲಿಗೆ ಬೆಳದಿರುವವರ ಗತಿ ಏನು ? ಅವರೇನು ಆರಮಾಗಿದ್ದರ ? ಬೇಂದ್ರೆಯವರೇ ಹೇಳಿದ ಇನ್ನೊಂದು ಮಾತಿದೆ ,
"ನೀನು ಅನ್ನವನ್ನು ತಿನ್ನದಿದ್ದರೆ ಅನ್ನ ನಿನ್ನನ್ನ ತಿನ್ನುತ್ತದೆ "
ಅನ್ನ ಕಾಂಚಾಣದ ಕಾಲ ತುದಿಗೆ ಬಂದು ಕುಳಿತಿದೆ , ಮಾನವನ ಬದುಕಿನ ಬೆಳವಣಿಗೆ ಅವನಲ್ಲಿ "ಅನ್ನ","ನೀರು","ಗಾಳಿ" , "ಬಟ್ಟೆ","ಸೂರು" ,"ಸಾಂಗತ್ಯ" ಕ್ಕೆ ಮೀರಿದ ಯಾವುದೋ ಆಸೆಗಳನ್ನ ಹುಟ್ಟು ಹಾಕಿದೆ. ಆ ಆಸೆ ಬಹುಶ ಭವಿಷ್ಯದ ಬಲವರ್ಧನೆ ಅಥವಾ ಇನ್ನೇನೋ ?
ಭವಿಷ್ಯಕ್ಕಾಗಿ ಬಹಳಷ್ಟು ಜನ ಮಾಡುವ ಒಂದೇ ಕೆಲಸ ಸಂಪತ್ತನ್ನ ಕೂಡಿಡುವುದು. ಅದು ನೆಲ ಮತ್ತು ಹಣದ ರೂಪದಲ್ಲಿ , ಮರ್ತಿದ್ದೆ ಬಂಗಾರದ ರೂಪದಲ್ಲಿ . ಗಾಂಧಿಜಿಯವರು ಹೇಳೋ ಪ್ರಕಾರ ಅವಶ್ಯಕತೆಗಿಂತ ಹೆಚ್ಚು ಏನನ್ನೇ ಕ್ರೋಢಿಕರಿಸಿದರು ಅದು ಕಳ್ಳತನವೆ ಸರಿ.
ಪೂರ್ಣ ಗಾಂಧಿಗಿರಿ ಸಾದ್ಯವಿಲ್ಲ ಎನ್ನುವ ಅಭಿಪ್ರಾಯ ನನಗೂ ಇದೆ , ಭವಿಷ್ಯ ನಿಧಿ ಇರಲಿ , ಎಸ್ಟಿರಬೇಕು ಎನ್ನುವ ಆಲೋಚನೆ ಯಾರೂ ಮಾಡುವುದಿಲ್ಲ , ಆಗಲೇ ಕಳ್ಳತನ ಕ್ರೂರಿಯಾಗುವುದು ,ಅಗತ್ಯವಿಲ್ಲದೆ ಇರುವ ಮಿತಿಯಿರದ ಇನ್ನು , ಹಣ ತರುವ "ಕೊಳ್ಳುವ ಶಕ್ತಿ" (buying power) ಮೇಲೆ ಎಲ್ಲರ ಕಣ್ಣು , ಏನು ಕೊಳ್ಳಬೇಕು ಎನ್ನುವುದು ಭವಿಷ್ಯ , ಹಾಗಾಗಿ ಹಣದ ದಾಹಕ್ಕೆ ಕೊನೆ ಇಲ್ಲ.
ಇನ್ನು ಹಸಿವಿನ ವಿಷಯ , ಬೆಳೆಯುವ ಭೂಮಿಯೆಲ್ಲ ಕಾಂಕ್ರೀಟ್ ಕಾಡು ಆದ ಮೇಲೆ ಬಂದಿರುವ ಅನ್ನದ ಬರಕ್ಕೆ ಮನುಷ್ಯ ತಿನ್ನದೇ ಇರುವ ವಸ್ತು ಸಿಗುವುದು ಅಪರೂಪ ಅಂದುಕೊಳ್ತೀನಿ . ಪ್ರತಿ ವರ್ಷವು ಕೇಳಿ ಬರುವ ರೈತನ ಆತ್ಮ ಹತ್ಯೆ , ಗೊಬ್ಬರದ ಅಭಾವ , ಬೆಂಬಲ ಬೆಲೆಯ ಸರ್ಕಸ್ ಇದೆಲ್ಲ ನೋಡಿದರೆ , ನಾನು ಹೆಚ್ಚು ಬೆಲೆ ಕೊಟ್ಟು ಕೊಳ್ಳುತ್ತಿರುವುದರ ಲಾಭ ರೈತನಿಗೆ ಯಾಕೆ ಹೋಗ್ತಾ ಇಲ್ಲ ಅಂತ ಪ್ರಶ್ನೆ ಹುಟ್ಟುತ್ತೆ . ಸ್ಥಿತಿವಂತ ರೈತರು ಹುಷಾರಾಗಿದ್ದಾರೆ , ದಲ್ಲಾಳಿ ಗಳು ಮಾಡುತ್ತಿದ್ದ ಕೆಲಸ ತಾವೇ ಮಾಡ್ತಿದ್ದಾರೆ .
ಸಣ್ಣ ಪುಟ್ಟ ರೈತರ ಬೆಳೆ ಕಡಿಮೆ ಬೆಲೆಗೆ ಖರೀದಿ ಮಾಡೋದು , ದಾಸ್ತಾನಿಟ್ಟು ಅಭಾವ ಸೃಸ್ತಿಸೋದು , ಬೆಲೆ ಜಾಸ್ತಿ ಆದಾಗ ಮಾರಿ ಲಾಭ ಹೊಡೆಯೋದು , ಬೆಲೆ ಕಡಿಮೆ ಆದ್ರೆ ಮತ್ತೆ ಚಿಕ್ಕ ರೈತರನ್ನ ಬೀದಿಗಿಲಿಸಿ ಬೆಂಬಲ ಬೆಲೆ ಕೇಳೋದು .ಬೆಳೆಯ ಸಾಲಮನ್ನಾ , ರೈತರ ಸಾಲಮನ್ನಾ , ಕೊಟ್ಟವನು ಕೋಡಂಗಿ , ಇಸ್ಕಂದವನು ಈರಭದ್ರ , ಏನೇ ಮಾಡಿದ್ರು , ಬಡವರ ಜೀವಮನ್ನಾ.
ಬುದ್ದಿ ಬರಲಿ ಅಂತ ಪುಕ್ಸಟ್ಟೆ ಸ್ಕೂಲಗಿದ್ದರು ಕಲಿಯನ್ಗಿಲ್ಲ , ಪುಕ್ಸಟ್ಟೆ ಆಸ್ಪತ್ರೆ ಅದ್ರ ಅವಸ್ತೆ ಕೇಳಂಗಿಲ್ಲ , ನೋಡೋಕೆ ಸವಲತ್ತಿದ್ರು ಏನು ಸಿಗೋ ಹಂಗಿಲ್ಲ , ಕುದ್ರೆಗೆ ನೀರು ತೋರಿಸ ಬಹುದು , ಕುದಿಸೋಕಾಗ್ತ್ಹಾದ ? ಬುದ್ದಿ ಕಲಿಯದವರಿಗೆ ಅಳಿವೆ ವರದಾನ . ಎಲೆಕ್ಷನ್ ಸರಾಯಿ ಕುಡುದು ಸಾಯೋ ಬುದ್ದಿಗೆ ಬಡತನದ ಬಟ್ಟೆ ತೊಡಿಸಿ ಸಿಂಗಾರ ಎಷ್ಟು ದಿನ ಮಾಡೋದು . ಪಾಠ ಕಲಿಯಲೆಬೀಕು , ಸಮಯ ಕಲಿಸುವಾಗ ಕರುಣೆಯಿಲ್ಲದೆ ಕೊಲ್ಲುತ್ತದೆ . ರೆಸೆರ್ವಷನ್ನು ಕ್ಯಾಟ್ ಗೋರಿ ಇನ್ನೆನ್ನಾದರು ಬಾಕಿ ಇದೆಯಾ ??
ಹೀಗೆ ಇರುವ ರೆಸೆರ್ವೆಶನ್ನಿನ್ನ ಲಾಭ ಸ್ಥಿತಿವಂತರಿಗೆ ಮಾತ್ರ ಸಿಗುತ್ತಿದೆ , ಇದನ್ನ ಬದಲಾಯಿಸುವ ಸಮಯ ಈಗ ಬಂದಿದೆ , ರೆಸೆರ್ವಷನ್ನು , ಸವಲತ್ತು ಗಳನ್ನ ಅರ್ಹ ಬಡವರಿಗೆ ಯಾವುದೇ ಜಾತಿ ಬೇಧವಿಲ್ಲದೆ ನೀಡಬೇಕು. ಬಹುಸಂಖ್ಯಾತರು , ಅಲ್ಪಸಂಖ್ಯಾತರು,
ಯಾರಪ್ಪ ಇವರೆಲ್ಲ ೧೦೦ ಕೋಟೀಮುಟ್ಟಿದ ಮೇಲೆ ? , ನೂರು ಮಕ್ಕಳ ಹಡೆದ ಅಲ್ಪರು. ಇದಕ್ಕೆ ಅಲ್ವೇ ಇವತ್ತು ನಕ್ಸಲ ರಾಕ್ಷಸರು , ಹುಟ್ಟಿರುವುದು .
ಇವತ್ತಿನ ಸಾಮಾಜಿಕ ಅಸಮಾನತೆ ಜಾತಿ ಅಧಾರಿತವಾಗಿಲ್ಲ, ಇದು ಅಂತಸ್ತು ಗಳ ಅಸಮಾನತೆ , ನೂರಾರು ಗೊಂದಲಗಳನ್ನ ಕೊಂದು, ಪ್ರತಿಯೊಂದಕ್ಕೂ ಬ್ರ್ಹಮನರನ್ನ , ಮೇಲ್ಜಾತಿಯವರನ್ನ ತೆಗಳುತ್ತ ಹಳೆ ರೋಗಕ್ಕೆ ಮದ್ದು ಕೊಡಬೇಡಿ , ಈಗ ರೋಗ ಬದಲಾಗಿದೆ . ಹೊಸ ರೋಗ ಹಸಿವನ್ನ ಮತ್ತು ಬೊಜ್ಜನ್ನ ಹುಟ್ಟು ಹಾಕುತ್ತ ಇದೆ , ಎಲ್ಲ್ಲ ಕಡೆಯಿಂದ ಬೊಜ್ಜು ಕತ್ತರಿಸಿ .
ಎಲ್ಲಾ ತರಹದ ಸಮಸ್ಯೆಗಳಿದ್ದರು ಆರಾಮಾಗಿರೋದು ದೇವರು ಮಾತ್ರ, ವಜ್ರದ ಕಿರಿಟ , ಬಂಗಾರದ ಕವಚ , ಬೆಳ್ಳಿ ರಥ , ಜೆಹಾದ್ ಸೈನ್ಯ , ಏನೆಲ್ಲಾ ಇದೆ , ಜನಕ್ಕೆ ಬದುಕಲು ಕಲಿಸುವ ಸಲುವಾಗಿ ಹುಟ್ಟಿದ ದೇವರ ಕಲ್ಪನೆಯನ್ನ , ಹಣದ ಹಸಿವಿನ ರಾಕ್ಷಸರು ಕೊಲ್ಲುತ್ತಿದ್ದಾರೆ . ಈಗೆಲ್ಲ ಪಾಪ ಪರಿಹರಿಸುವ ದೇವರಿಗೆ ಕಿಮ್ಮತ್ತು , ಏನೆಲ್ಲಾ ಹಾರಾಮಿ ಕೆಲಸ ಮಾಡಬೇಕು ದೇವರನ್ನ ಖುಷಿ ಪಡಿಸಲು , ಅವರಿವರ ತಲೆ ಹೊಡೆದು ವಜ್ರ , ವೈಡೂರ್ಯ ಕೊಡಬೇಕು , ಸಾವಿರಾರು ಜೀವ ತೆಗೆದು ರಕ್ತ ತರ್ಪಣ ಮಾಡಬೇಕು . ಇಲ್ಲಿರುವುದು ದೇವರಲ್ಲ , ಹಣ ಮತ್ತು ಹಸಿವು ಹಾಗೂ ದೇವರ ಹೆಣ, ಅದರ mummy ಜೊತೆಗೆ ಸುಘಂದ ಪುಷ್ಪಾದಿಗಳು , ಹಾವನ್ನ ತಿನ್ನೋ ಹದ್ದುಗಳು ದೇವ ಮಾನವರು
ಮುಳುಗಲು ಸಾಧ್ಯವೇ ಇಲ್ಲ ಎಂದು ಬಣ್ಣಿಸಲಾದ ಟೈಟಾನಿಕ್ ಕೂಡಾ ಮುಳುಗುತ್ತದೆ. ಸಹಸ್ರ ಬದುಕುಗಳ ಭಗ್ನ ಪ್ರತಿಮೆಗಳನ್ನು ಸ್ರುಷ್ಟಿಸುತ್ತದೆ ಆದರೆ ಮಾನವನ ಆಶೋತ್ತರಗಳ ನೌಕೆ ಎಂದಿಗೂ ಮುಳುಗಲು ಸಾಧ್ಯವಿಲ್ಲ.
ಜುಲೈ 31, 2008
ಜುಲೈ 25, 2008
ಬೆಂದಕಾಳೂರಿನಲ್ಲೂ ಬೇಯಿಸಲು ಬಂದಿರುವ ಬಾಂಬು ಮತ್ತು ಮನುಷ್ಯತ್ವದ ಪ್ರಶ್ನೆ
ಬೆಂಗಳೂರಿಗೂ ಬಾಂಬು ಬಂದಿದೆ. ಬೆಂಗಳೂರಿನ ಪ್ರಶಾಂತತೆಗೆ ಸೋತು ಇಲ್ಲಿ ನೆಲೆಸಿರುವ ಮುಂಬೈ ಮತ್ತು ಕಾಶ್ಮೀರದ ಜನರು ಕೂಡ ದಂಗಾಗಿದ್ದಾರೆ.
ಇಂಥಹ ವಿಚಿತ್ರದ ಬಗ್ಗೆ ಅರಿವಿಲ್ಲದ ಖಾಸಾ ಬೆಂಗಳೂರಿನ ಜನ ಕಂಗಾಲಾಗಿದ್ದಾರೆ.
ಬಾಂಬುಗಳೆಂದರೆ ಬರಿ ಗಡಿಯಲ್ಲಿ ವೈರಿಗಳೊಂದಿಗೆ ಹೋರಾಡುವ ಸಾಧನವೆಂದಷ್ಟೆ ಕಲ್ಪನೆಯಲ್ಲಿರುವ ಉತ್ತರ ಕರ್ನಾಟಕದ ಹಳ್ಳಿಗರಂತು ಬೆಂಗಳೂರು ಬದುಕುವ ಜಾಗವಲ್ಲವೆಂದು ನಿರ್ಧರಿಸಲೂ ಸಾಕು.
ಕಾಶ್ಮಿರದಲ್ಲಿ ಕೆಲ ದಿನಗಳ ಹಿಂದೆ ೭ ದಿನಗಳ ಕರ್ಫ಼್ಯೂ ಇತ್ತು. ಜನ ಅಲ್ಲಿಯೂ ತುಂಬಾ ತೊಂದರೆಗೀಡಾದರು. ಅಸ್ಸಾಂ,ಮುಂಬೈ,ಕಾಶ್ಮಿರ ಗಳಲ್ಲಿಯ ಬಾಂಬುಗಳಿಗಿರುವ ಸಮಜಾಯಿಷಿಯನ್ನ ಬೆಂಗಳೂರಿನ ಸ್ಪೋಟಗಳಿಗೆ ಕೊಡಲು ಸಾಧ್ಯವೇ ಇಲ್ಲ. ಅಲ್ಲಿಗೆ ಈ ಬಾಂಬುಗಳು ಸ್ವಾತಂತ್ರ್ಯ ಮತ್ತು ಅಸ್ಥಿತ್ವಕ್ಕೆ ಹೋರಾಡುವವರ ಆಯುಧಗಳೇ ಅಲ್ಲ. ಅದೊಂದು ವಿಕ್ರುತ ಮನಸ್ಸಿನ ಕೈಯಲ್ಲಿರುವ ಅಪಾಯಕಾರಿ ಆಯುಧ.
ಅದನ್ನ ಬಳಸಲು ಆ ವಿಕ್ರುತ ಮನಸ್ಸು ನೀಡುವ ಕಾರಣಗಳೆಲ್ಲ, ನಂತರ ಹುಡಿಕಿದವೇ ಹೊರತು, ಸ್ಪಷ್ಟ ಉದ್ದೇಶವಿರುವ ವಿವೇಕಿಯೊಬ್ಬ ಇಂಥಹ ಒಂದು ಕಲ್ಪನೆಯನ್ನೂ ಮಾಡಲಾರ. ಮತ್ತೋಂದು ವಿಷಯ ಬಾಂಬುಗಳನ್ನ ತಡೆಯಬಹುದೆ ಹೊರತು, ಬಾಂಬು ಸಿಡಿಯುವುದನ್ನಲ್ಲ.
ಬಾಂಬು ಎಲ್ಲಿಂದ ಬಂದರೂ ಎಲ್ಲಿ ಬಿದ್ದರೂ ಆಗುವುದು ಒಂದೆ, ನಾಶ.
ನನಗೇನೋ ಇದನ್ನೆಲ್ಲಾ ನೋಡಿ ಮನುಷ್ಯನೆಂಬ ಪ್ರಾಣಿಯ ಸಾಮಾಜಿಕ ಜೀವನದ ಕಲ್ಪನೆಯೆ ಅರ್ಥವಾಗುತ್ತಿಲ್ಲ.ಒಂದು ಧರ್ಮದ ಸಾಮಾಜಿಕ ಕಲ್ಪನೆ ಇನ್ನೋಂದು ಧರ್ಮದ ಕಲ್ಪನೆಯ ಜೊತೆಗೆ ಜನರನ್ನ ಕೊಲ್ಲುವುದು, ಓಂದು ಭಾಷೆಯ ಸಾಮಾಜಿಕ ಕಲ್ಪನೆ ಮತ್ತೋಂದು ಭಾಷೆಯ ಜನರನ್ನ ಕೊಲ್ಲುವುದು. ಓಂದು ಪ್ರಾದೇಶಿಕ ಸಮಾಜದ ಕಲ್ಪನೆ ಮತ್ತೋಂದು ಪ್ರದೇಶದ ಜನರನ್ನ ಕೊಲ್ಲುವುದು ವಿಚಿತ್ರವಾಗಿದೆ. ಮತ್ತು ಪ್ರಕ್ರುತಿಯ ನಿಯಮಕ್ಕೂ ವಿರುದ್ದವಾಗಿದೆ.
ನ್ಯಾಶನಲ್ ಜಿಯೋಗ್ರಾಫ಼ಿಯನ್ನ ದಿನಾ ನೋಡುತ್ತೆನೆ, ಹುಲಿ ಹುಲಿಯನ್ನ ಬೇಟೆಯಾಡುವುದು, ನರಿ ನರಿಯನ್ನ ತಿನ್ನುವುದನ್ನ ನೋಡೇ ಇಲ್ಲ.
ಈ ದರಿದ್ರ ಮನುಷ್ಯನ ಬುದ್ದಿ ಅರ್ಥವಿಲ್ಲದ ತಾನೆ ಹೆಣೆದ ಬಲೆಯಲ್ಲಿ ಬಿದ್ದಿದೆ. ಸ್ಪರ್ದೆಯ ಜಾಗಕ್ಕೆ ಹೊಂದಾಣಿಕೆ ಬರಬೇಕಿದ್ದ ಸ್ವಚ್ಛ ಸಮಾಜ ರಿವರ್ಸ್ ಗೇರ್ನಲ್ಲಿದೆ, ಹೊಂದಾಣಿಕೆಯ ಜಾಗದಲ್ಲಿ ಗೆಲುವೇ ಇಲ್ಲದ ಸ್ಪರ್ದೆ ಬಂದಿದೆ.
ಇದು ಹೀಗೆ ಇರೊದಾದ್ರೆ ಸಮಾಜದ ಕಲ್ಪನೆಯನ್ನ ಬಿಡೋದೆ ಒಳ್ಳೇದು.
ಇಂಥಹ ವಿಚಿತ್ರದ ಬಗ್ಗೆ ಅರಿವಿಲ್ಲದ ಖಾಸಾ ಬೆಂಗಳೂರಿನ ಜನ ಕಂಗಾಲಾಗಿದ್ದಾರೆ.
ಬಾಂಬುಗಳೆಂದರೆ ಬರಿ ಗಡಿಯಲ್ಲಿ ವೈರಿಗಳೊಂದಿಗೆ ಹೋರಾಡುವ ಸಾಧನವೆಂದಷ್ಟೆ ಕಲ್ಪನೆಯಲ್ಲಿರುವ ಉತ್ತರ ಕರ್ನಾಟಕದ ಹಳ್ಳಿಗರಂತು ಬೆಂಗಳೂರು ಬದುಕುವ ಜಾಗವಲ್ಲವೆಂದು ನಿರ್ಧರಿಸಲೂ ಸಾಕು.
ಕಾಶ್ಮಿರದಲ್ಲಿ ಕೆಲ ದಿನಗಳ ಹಿಂದೆ ೭ ದಿನಗಳ ಕರ್ಫ಼್ಯೂ ಇತ್ತು. ಜನ ಅಲ್ಲಿಯೂ ತುಂಬಾ ತೊಂದರೆಗೀಡಾದರು. ಅಸ್ಸಾಂ,ಮುಂಬೈ,ಕಾಶ್ಮಿರ ಗಳಲ್ಲಿಯ ಬಾಂಬುಗಳಿಗಿರುವ ಸಮಜಾಯಿಷಿಯನ್ನ ಬೆಂಗಳೂರಿನ ಸ್ಪೋಟಗಳಿಗೆ ಕೊಡಲು ಸಾಧ್ಯವೇ ಇಲ್ಲ. ಅಲ್ಲಿಗೆ ಈ ಬಾಂಬುಗಳು ಸ್ವಾತಂತ್ರ್ಯ ಮತ್ತು ಅಸ್ಥಿತ್ವಕ್ಕೆ ಹೋರಾಡುವವರ ಆಯುಧಗಳೇ ಅಲ್ಲ. ಅದೊಂದು ವಿಕ್ರುತ ಮನಸ್ಸಿನ ಕೈಯಲ್ಲಿರುವ ಅಪಾಯಕಾರಿ ಆಯುಧ.
ಅದನ್ನ ಬಳಸಲು ಆ ವಿಕ್ರುತ ಮನಸ್ಸು ನೀಡುವ ಕಾರಣಗಳೆಲ್ಲ, ನಂತರ ಹುಡಿಕಿದವೇ ಹೊರತು, ಸ್ಪಷ್ಟ ಉದ್ದೇಶವಿರುವ ವಿವೇಕಿಯೊಬ್ಬ ಇಂಥಹ ಒಂದು ಕಲ್ಪನೆಯನ್ನೂ ಮಾಡಲಾರ. ಮತ್ತೋಂದು ವಿಷಯ ಬಾಂಬುಗಳನ್ನ ತಡೆಯಬಹುದೆ ಹೊರತು, ಬಾಂಬು ಸಿಡಿಯುವುದನ್ನಲ್ಲ.
ಬಾಂಬು ಎಲ್ಲಿಂದ ಬಂದರೂ ಎಲ್ಲಿ ಬಿದ್ದರೂ ಆಗುವುದು ಒಂದೆ, ನಾಶ.
ನನಗೇನೋ ಇದನ್ನೆಲ್ಲಾ ನೋಡಿ ಮನುಷ್ಯನೆಂಬ ಪ್ರಾಣಿಯ ಸಾಮಾಜಿಕ ಜೀವನದ ಕಲ್ಪನೆಯೆ ಅರ್ಥವಾಗುತ್ತಿಲ್ಲ.ಒಂದು ಧರ್ಮದ ಸಾಮಾಜಿಕ ಕಲ್ಪನೆ ಇನ್ನೋಂದು ಧರ್ಮದ ಕಲ್ಪನೆಯ ಜೊತೆಗೆ ಜನರನ್ನ ಕೊಲ್ಲುವುದು, ಓಂದು ಭಾಷೆಯ ಸಾಮಾಜಿಕ ಕಲ್ಪನೆ ಮತ್ತೋಂದು ಭಾಷೆಯ ಜನರನ್ನ ಕೊಲ್ಲುವುದು. ಓಂದು ಪ್ರಾದೇಶಿಕ ಸಮಾಜದ ಕಲ್ಪನೆ ಮತ್ತೋಂದು ಪ್ರದೇಶದ ಜನರನ್ನ ಕೊಲ್ಲುವುದು ವಿಚಿತ್ರವಾಗಿದೆ. ಮತ್ತು ಪ್ರಕ್ರುತಿಯ ನಿಯಮಕ್ಕೂ ವಿರುದ್ದವಾಗಿದೆ.
ನ್ಯಾಶನಲ್ ಜಿಯೋಗ್ರಾಫ಼ಿಯನ್ನ ದಿನಾ ನೋಡುತ್ತೆನೆ, ಹುಲಿ ಹುಲಿಯನ್ನ ಬೇಟೆಯಾಡುವುದು, ನರಿ ನರಿಯನ್ನ ತಿನ್ನುವುದನ್ನ ನೋಡೇ ಇಲ್ಲ.
ಈ ದರಿದ್ರ ಮನುಷ್ಯನ ಬುದ್ದಿ ಅರ್ಥವಿಲ್ಲದ ತಾನೆ ಹೆಣೆದ ಬಲೆಯಲ್ಲಿ ಬಿದ್ದಿದೆ. ಸ್ಪರ್ದೆಯ ಜಾಗಕ್ಕೆ ಹೊಂದಾಣಿಕೆ ಬರಬೇಕಿದ್ದ ಸ್ವಚ್ಛ ಸಮಾಜ ರಿವರ್ಸ್ ಗೇರ್ನಲ್ಲಿದೆ, ಹೊಂದಾಣಿಕೆಯ ಜಾಗದಲ್ಲಿ ಗೆಲುವೇ ಇಲ್ಲದ ಸ್ಪರ್ದೆ ಬಂದಿದೆ.
ಇದು ಹೀಗೆ ಇರೊದಾದ್ರೆ ಸಮಾಜದ ಕಲ್ಪನೆಯನ್ನ ಬಿಡೋದೆ ಒಳ್ಳೇದು.
ಜುಲೈ 22, 2008
ಮರೆಯಾದ ಗೆಳೆಯನಿಗೆ ನಮನ

ದಿನಾ ಸವೆಯುತ್ತಿರುವ ಬದುಕಿನ ಮತ್ತೋಂದು ಪುಟ ಬೆಳೆಯುವುದನ್ನ ನಿಲ್ಲಿಸಿದೆ. ಚೆನ್ನೈನ ಬಿರು ಬಿಸಿಲಿನಲ್ಲೂ ಬದುಕಿನ ಚಿಲುಮೆಯನ್ನ ಕಂಡುಕೊಂಡಿದ್ದ ಮತ್ತು ನನಗೆ ತೋರಿಸಿದ್ದ ಸಾಜನ್ ಮರೆಯಾಗಿದ್ದಾನೆ. ಅವನೊಂದಿಗೆ ಆಫ಼ೀಸಿನಲ್ಲಿ ಕಳೆದ ೬ ತಿಂಗಳುಗಳೆ ನನಗೆ ದಕ್ಕಿದ ಸಮಯವಾಗಲಿದೆ.
ತುಂಬಾ ಚುರುಕಾಗಿದ್ದ, ಮತ್ತು ತುಂಬಾ ಚಿಕ್ಕವನಾಗಿದ್ದ ಹಾಗೂ ಜೀವನ್ಮುಖಿಯಾಗಿದ್ದ ಹುಡುಗನ ಸಾವನ್ನು ನಂಬುವುದಕ್ಕೆ ಆಗುತ್ತಿಲ್ಲ. ಸದಾ ಸಂತೋಷವಾಗಿರುತ್ತಿದ್ದ ನಗುಮುಖದ ಗೆಳೆಯನ ನಗೆ ಮರೆಯಾಗಿ ಹೋಗಿದೆ.
ಕಾಲನ ಕ್ರೂರತೆಯನ್ನ ದೈನ್ಯವಾಗಿ ನೋಡಿ , ಅಸಹಾಯಕತೆಗೆ ಮರುಗುವ ದಿನ ಮತ್ತೊಮ್ಮೆ. ಅವನ ಆತ್ಮಕ್ಕೆ ಶಾಂತಿ ಮತ್ತು ಕುಟುಂಬಕ್ಕೆ ಶಕ್ತಿಯನ್ನ ಭಗವಂತನಲ್ಲಿ ಬೇಡುತ್ತೇನೆ. ಹಾಗೆ ಅವನಿಗೆ ಮತ್ತೋಂದು ಅವಕಾಶವನ್ನು ಕೂಡಾ.
ಅವನು ನನಲ್ಲಿ ತೋರಿಸಿದ ಪ್ರೀತಿ, ವಿಶ್ವಾಸಗಳು ನನ್ನಲ್ಲಿ ಸಾಲವಾಗಿ ಉಳಿಯಲಿವೆ. ಅವನು ನನಗೆ ಉಡುಗೊರೆಯಾಗಿ ಕೊಟ್ಟ ಬ್ಯಾಗ್ ಅವನ ನೆನಪಾಗಿದೆ. ಅವನು ನನಗೆ ನನ್ನ ಕೊನೆ ಭೇಟಿಯಲ್ಲಿ ನೀಡಿದ್ದ ಆರ್ಛಿಸ್ ಕಾರ್ಡ್ , ನನಗಾಗಿ ಕೋರಿದ್ದ ಶುಭ್ಹಾಶಯಗಳು ಅವನ ಮುಖವನ್ನ ಮರೆಯಾಗದಂತೆ ಮಾಡಿವೆ.
ಅಪರೂಪದ ಕಲಾವಿದನಾಗಿದ್ದ ಗೆಳೆಯನ ಪುಟ್ಟ ಪಾತ್ರದ ಬಗ್ಗೆ ದುಃಖವಾಗುತ್ತಿದೆ. ಕಲಾವಿದ ನಿರ್ದೇಶಕನ ಬಗ್ಗೆ ಮಾಡಬಹುದಾದ ಟೀಕೆ ಮತ್ತು ವಿಮರ್ಶೆಗಳಿಗೆ ಅರ್ಥ ಸ್ವಲ್ಪ ಕಡಿಮೆಯೆ ಆದರೂ ಅಸಮಾಧಾನ ಮಾತ್ರ ಇದೆ.
ಪ್ರೀತಿಯ ಸಾಜನ್ ನಿನ್ನ ಸವಿನೆನಪುಗಳಲ್ಲಿ, ನೀ ನನ್ನಲ್ಲಿ ತೋರಿದ ಸ್ನೇಹಕ್ಕೆ ರುಣಿಯಾಗಿದ್ದೆನೆ. ನನಗೆ ಗೊತ್ತಿದೆ, ಮತ್ತು ನಿನಗೂ ಗೊತ್ತಿದೆ,
Living is a Task and Show must Go ON
ಜುಲೈ 7, 2008
ಅಳತೆ
೧೦೦ ಕಿಲೊಗ್ರಾಂ ಉದ್ದ,
೧೦೦ ಕಿಲೊಮೀಟರ್ ತೂಕ
ಡಾಲರ್ ಪೌಂಡ್ ಗಳ ವ್ಯಕ್ತಿತ್ವ ಎಲ್ಲವೂ ತಪ್ಪಳತೆ,
ಆದರೆ ಅವಕ್ಕೆ ಸರಿಯಾದ ಅಳತೆ ಅಂತಾ ಒಂದಿದೆ.
ಆದರೆ ಪ್ರೀತಿಯ ಸರಿಯಾದ ಅಳತೆ ಯಾವುದು ? ತಪ್ಪಾದ ಅಳತೆಯಾದರೂ ಯಾವುದು ?
ಬಡೆತ್ತದಕ್ಕೆ ಮಾನಕ ಅಂತ ಯಾವುದೂ ಇಲ್ಲ, ಅದಕ್ಕೆ ಒಬ್ಬೋಬ್ಬರ ದ್ರಷ್ಟಿಲಿ ಓಂದೊಂದು ಥರಾ.
ನಾನಂದುಕೊಂಡ ಹಾಗೆ ನೀನಂದುಕೊಳ್ಳದಿದ್ದರೆ ನನ್ನ ತಪ್ಪಾ ???
ಮಂಕೆ ಅನವಶ್ಯಕವಾಗಿ ಅಳಿಬೇಡ, ಮತ್ತೆ ಹಳಿಬೇಡ.
೧೦೦ ಕಿಲೊಮೀಟರ್ ತೂಕ
ಡಾಲರ್ ಪೌಂಡ್ ಗಳ ವ್ಯಕ್ತಿತ್ವ ಎಲ್ಲವೂ ತಪ್ಪಳತೆ,
ಆದರೆ ಅವಕ್ಕೆ ಸರಿಯಾದ ಅಳತೆ ಅಂತಾ ಒಂದಿದೆ.
ಆದರೆ ಪ್ರೀತಿಯ ಸರಿಯಾದ ಅಳತೆ ಯಾವುದು ? ತಪ್ಪಾದ ಅಳತೆಯಾದರೂ ಯಾವುದು ?
ಬಡೆತ್ತದಕ್ಕೆ ಮಾನಕ ಅಂತ ಯಾವುದೂ ಇಲ್ಲ, ಅದಕ್ಕೆ ಒಬ್ಬೋಬ್ಬರ ದ್ರಷ್ಟಿಲಿ ಓಂದೊಂದು ಥರಾ.
ನಾನಂದುಕೊಂಡ ಹಾಗೆ ನೀನಂದುಕೊಳ್ಳದಿದ್ದರೆ ನನ್ನ ತಪ್ಪಾ ???
ಮಂಕೆ ಅನವಶ್ಯಕವಾಗಿ ಅಳಿಬೇಡ, ಮತ್ತೆ ಹಳಿಬೇಡ.
ಜುಲೈ 3, 2008
ಸ್ಲ್ಯಾಮ್ ಬುಕ್ ಎಂಬ ಒಂದು ವಕ್ತಾರ
ಮತ್ತೆ ನನ್ನ ಸ್ಲ್ಯಾಮ್ ಬುಕ್ ತೆಗೆದು ಓದುತ್ತಿದ್ದೆ, ಕಾಲೇಜಿನ ನೆನಪುಗಳು,ಕಾಲೇಜಿನ ಹುಡುಗಿಯರು,ಮತ್ತೆ ಮಾಸ್ತರರು ನೆನಪಾಗುತ್ತಿದ್ದಾರೆ.
ಹಾಸ್ಟೆಲ್ನಲ್ಲಿ ತುಂಬಾ ಹತ್ತಿರವಾಗಿದ್ದ ಕೆಲ ಗೆಳೆಯರ ನೆನಪು ಈಗ ನನ್ನಪ್ಪ ಆಗ ನನಗೆ ಕೊಟ್ಟಿದ್ದ ಒಂದು ಡೈರಿಯ ಮತ್ತೊಂದು ಹಾಳೆ ಮಾತ್ರ.
ಅದ್ರುಷ್ಟ ಇಲ್ಲೂ ನನ್ನ ಜೊತೆಗಿದೆ,ತುಂಬಾ ಗೆಳೆಯರು ಈಗಲೂ ಬಳಿಯಲ್ಲಿಯೆ ಇದ್ದಾರೆ.ಆದರೆ ಮರೆಯಾದವರು ಮಾತ್ರ ಡೈರಿಯ ಹಾಳೆ.
ನನಗೆ ಚೆನ್ನಾಗಿ ನೆನಪಿದೆ,ಸ್ಲ್ಯಾಮ್ ಬುಕ್ ತೆಗೆದುಕೊಂಡು ಕಾಲೇಜಿನ ಕೊನೆ ದಿನಗಳಲ್ಲಿ ಓಡಾಡುತ್ತಿದ್ದಾಗ ನಾ ಮಾಡುತ್ತಿದ್ದದ್ದು ನನ್ನ ಮರೆವನ್ನು ಮೆಟ್ಟಬೇಕೆನ್ನುವ್ವ ವಿಚಿತ್ರ ಹಟ.ಈ ಹಟದಲ್ಲಿ ನಾನು ನಾಲ್ಕು ವರ್ಷಗಳಲ್ಲಿ ನಾಲ್ಕು ಬಾರಿಯು ನೆಟ್ಟಗೆ ಮಾತನಾಡದವರ ಬಳಿಗೆ ಕೂಡ ಹೋದೆ.
ಇನ್ನೋಂದು hidden agenda ಇತ್ತು. ಬಹಳ ಸಲ ಗುಮ್ಮನಂತೆ ತೆಪ್ಪಗಿದ್ದ ನನ್ನ ಬಗ್ಗೆ ಮಿಕ್ಕಿದವರು ಏನು ಯೋಚನೆ ಮಾಡ್ತಿದ್ದಾರೆ ಅಂತ ನನಗೆ ಗೊತ್ತಾಗಬೇಕಿತ್ತು. ನನ್ನದೆ ಆದ ಗುಂಪಿನಲ್ಲಿ ನಾನು ಗುಮ್ಮನಿರಲಿಲ್ಲ,ಹಂಗತ ಉಳಿದವರಲ್ಲಿ ನಾನೇನು ತೆಪ್ಪಗಿರುವ ನಾಟಕವಾದಲ್ಲಿಲ್ಲ ಮತ್ತು ನನಗೆ ದೊಡ್ಡ ನಿರಾಸಕ್ತಿಯೇನು ಇರಲ್ಲಿಲ್ಲ, ಯಾಕೊ ನಾನು ಕಾಲೇಜಿಗೂ ನೆಟ್ಟಗೆ ಹೋಗಲ್ಲಿಲ್ಲ.ಮತ್ತೆ ನನ್ನ ಸ್ಲ್ಯಾಮ್ ಬುಕ್ ನಲ್ಲಿ ಯಾವ ಮಾಸ್ತರನು ಇಲ್ಲ.ಎಲ್ಲರೂ ನೆನಪಿದ್ದಾರೆ!!!!
ಮತ್ತೆ ಮರೆಯಾದ ಗೆಳೆಯರಿದ್ದಾರಲ್ಲಾ,ಅವ್ರು ಈವರೆಗು ಸಿಕ್ಕಿಲ್ಲ.ಬದುಕಿನ ಗಿಡಕ್ಕಿರುವ ಸಾವಿರಾರು ಕವಲುಗಳ ಎಲ್ಲಾ ಕೊನೆಗಳನ್ನು ನೋಡುವುದು ಅಸಾಧ್ಯ.ಕೊಂಬೆ ದೊಡ್ಡದಾಗಿದೆ ಅನ್ನೋ ಸಮಾಧಾನ.
ಅಲ್ಲಿಗೆ ನನ್ನ ಮರೆವು ಕೆವಲ ಪೆನ್ನು,ಪುಸ್ತಕ,ಮೊಬೈಲ್ಗೆ ಮಾತ್ರ ಸೀಮಿತ.ಮನುಷ್ಯರನ್ನೆ ಮರೆವಷ್ಟು ಮೂರ್ಖತನ ನನಗಿಲ್ಲ. ಆದರೆ ಸ್ಲ್ಯಾಮ್ ಬುಕ್ನಿಂದ ಓಂದು ಉಪಯೋಗ ಆಗಿದೆ.ಕಿಶೋರ್ ಕುಮಾರ್ನ ಹಾಡಿದೆಯಲ್ಲಾ,
ಆತೆ ಜಾತೆ ಖೂಬಸೂರತ್ ಆವಾರ ಸಡಕೋಂಪೆ,
ಕಭಿ ಕಭಿ ಇತ್ತಫಾಕ್ ಸೆ...............
ಉನ್ಮೆಸೆ ಕುಚ್ ಲೋಗ್ ಭೂಲ್ ಜಾತೆ ಹೈ, ಅವ್ರು ಹಾಳೆಯಾಗಿದ್ದಾರೆ.ಹಾಳೆಯಾಗಿ ನೆನಪಿದ್ದಾರೆ.
ಮತ್ತೋಂದು ಬಹಳ ಓಳ್ಳೆ ಉಪಯೋಗವಾಗಿದೆ.ಸ್ಲ್ಯಾಮ್ ಬುಕ್ ಬರೆದ ಹುಡಿಗಿಯೊಬ್ಬಳ ಅಂದವಾದ ಬರವಣಿಗೆ ನನ್ನಲ್ಲಿ ಬಹಳ ಮಧುರವಾದ ಭಾವನೆಯೊಂದನ್ನ ತಂದಿತ್ತು.ಬರವಣಿಗೆ ಶಿಸ್ತಿನ ಲಕ್ಷಣವೆಂದು ನಂಬಿದ್ದು ಮತ್ತೋಂದು ಕಾರಣವಾಗಿತ್ತು, ಹೆಚ್ಹೂ ಕಮ್ಮಿ ಅಲ್ಲಿಗೆ ಮುಗಿತು.
ಮತ್ತೆ ಸ್ಲ್ಯಾಮ್ ಬುಕ್ ಓದಿದೆ ಮತ್ತೆ ನೆನಪಾದಳು,ಬುಕ್ ಮುಚ್ಚಿದಾಗ ಮರೆಯಾದಳು :).
ಹಾಸ್ಟೆಲ್ನಲ್ಲಿ ತುಂಬಾ ಹತ್ತಿರವಾಗಿದ್ದ ಕೆಲ ಗೆಳೆಯರ ನೆನಪು ಈಗ ನನ್ನಪ್ಪ ಆಗ ನನಗೆ ಕೊಟ್ಟಿದ್ದ ಒಂದು ಡೈರಿಯ ಮತ್ತೊಂದು ಹಾಳೆ ಮಾತ್ರ.
ಅದ್ರುಷ್ಟ ಇಲ್ಲೂ ನನ್ನ ಜೊತೆಗಿದೆ,ತುಂಬಾ ಗೆಳೆಯರು ಈಗಲೂ ಬಳಿಯಲ್ಲಿಯೆ ಇದ್ದಾರೆ.ಆದರೆ ಮರೆಯಾದವರು ಮಾತ್ರ ಡೈರಿಯ ಹಾಳೆ.
ನನಗೆ ಚೆನ್ನಾಗಿ ನೆನಪಿದೆ,ಸ್ಲ್ಯಾಮ್ ಬುಕ್ ತೆಗೆದುಕೊಂಡು ಕಾಲೇಜಿನ ಕೊನೆ ದಿನಗಳಲ್ಲಿ ಓಡಾಡುತ್ತಿದ್ದಾಗ ನಾ ಮಾಡುತ್ತಿದ್ದದ್ದು ನನ್ನ ಮರೆವನ್ನು ಮೆಟ್ಟಬೇಕೆನ್ನುವ್ವ ವಿಚಿತ್ರ ಹಟ.ಈ ಹಟದಲ್ಲಿ ನಾನು ನಾಲ್ಕು ವರ್ಷಗಳಲ್ಲಿ ನಾಲ್ಕು ಬಾರಿಯು ನೆಟ್ಟಗೆ ಮಾತನಾಡದವರ ಬಳಿಗೆ ಕೂಡ ಹೋದೆ.
ಇನ್ನೋಂದು hidden agenda ಇತ್ತು. ಬಹಳ ಸಲ ಗುಮ್ಮನಂತೆ ತೆಪ್ಪಗಿದ್ದ ನನ್ನ ಬಗ್ಗೆ ಮಿಕ್ಕಿದವರು ಏನು ಯೋಚನೆ ಮಾಡ್ತಿದ್ದಾರೆ ಅಂತ ನನಗೆ ಗೊತ್ತಾಗಬೇಕಿತ್ತು. ನನ್ನದೆ ಆದ ಗುಂಪಿನಲ್ಲಿ ನಾನು ಗುಮ್ಮನಿರಲಿಲ್ಲ,ಹಂಗತ ಉಳಿದವರಲ್ಲಿ ನಾನೇನು ತೆಪ್ಪಗಿರುವ ನಾಟಕವಾದಲ್ಲಿಲ್ಲ ಮತ್ತು ನನಗೆ ದೊಡ್ಡ ನಿರಾಸಕ್ತಿಯೇನು ಇರಲ್ಲಿಲ್ಲ, ಯಾಕೊ ನಾನು ಕಾಲೇಜಿಗೂ ನೆಟ್ಟಗೆ ಹೋಗಲ್ಲಿಲ್ಲ.ಮತ್ತೆ ನನ್ನ ಸ್ಲ್ಯಾಮ್ ಬುಕ್ ನಲ್ಲಿ ಯಾವ ಮಾಸ್ತರನು ಇಲ್ಲ.ಎಲ್ಲರೂ ನೆನಪಿದ್ದಾರೆ!!!!
ಮತ್ತೆ ಮರೆಯಾದ ಗೆಳೆಯರಿದ್ದಾರಲ್ಲಾ,ಅವ್ರು ಈವರೆಗು ಸಿಕ್ಕಿಲ್ಲ.ಬದುಕಿನ ಗಿಡಕ್ಕಿರುವ ಸಾವಿರಾರು ಕವಲುಗಳ ಎಲ್ಲಾ ಕೊನೆಗಳನ್ನು ನೋಡುವುದು ಅಸಾಧ್ಯ.ಕೊಂಬೆ ದೊಡ್ಡದಾಗಿದೆ ಅನ್ನೋ ಸಮಾಧಾನ.
ಅಲ್ಲಿಗೆ ನನ್ನ ಮರೆವು ಕೆವಲ ಪೆನ್ನು,ಪುಸ್ತಕ,ಮೊಬೈಲ್ಗೆ ಮಾತ್ರ ಸೀಮಿತ.ಮನುಷ್ಯರನ್ನೆ ಮರೆವಷ್ಟು ಮೂರ್ಖತನ ನನಗಿಲ್ಲ. ಆದರೆ ಸ್ಲ್ಯಾಮ್ ಬುಕ್ನಿಂದ ಓಂದು ಉಪಯೋಗ ಆಗಿದೆ.ಕಿಶೋರ್ ಕುಮಾರ್ನ ಹಾಡಿದೆಯಲ್ಲಾ,
ಆತೆ ಜಾತೆ ಖೂಬಸೂರತ್ ಆವಾರ ಸಡಕೋಂಪೆ,
ಕಭಿ ಕಭಿ ಇತ್ತಫಾಕ್ ಸೆ...............
ಉನ್ಮೆಸೆ ಕುಚ್ ಲೋಗ್ ಭೂಲ್ ಜಾತೆ ಹೈ, ಅವ್ರು ಹಾಳೆಯಾಗಿದ್ದಾರೆ.ಹಾಳೆಯಾಗಿ ನೆನಪಿದ್ದಾರೆ.
ಮತ್ತೋಂದು ಬಹಳ ಓಳ್ಳೆ ಉಪಯೋಗವಾಗಿದೆ.ಸ್ಲ್ಯಾಮ್ ಬುಕ್ ಬರೆದ ಹುಡಿಗಿಯೊಬ್ಬಳ ಅಂದವಾದ ಬರವಣಿಗೆ ನನ್ನಲ್ಲಿ ಬಹಳ ಮಧುರವಾದ ಭಾವನೆಯೊಂದನ್ನ ತಂದಿತ್ತು.ಬರವಣಿಗೆ ಶಿಸ್ತಿನ ಲಕ್ಷಣವೆಂದು ನಂಬಿದ್ದು ಮತ್ತೋಂದು ಕಾರಣವಾಗಿತ್ತು, ಹೆಚ್ಹೂ ಕಮ್ಮಿ ಅಲ್ಲಿಗೆ ಮುಗಿತು.
ಮತ್ತೆ ಸ್ಲ್ಯಾಮ್ ಬುಕ್ ಓದಿದೆ ಮತ್ತೆ ನೆನಪಾದಳು,ಬುಕ್ ಮುಚ್ಚಿದಾಗ ಮರೆಯಾದಳು :).
ಜೂನ್ 21, 2008
ಆತ್ಮದ ಕತೆ ಓದಿದ ನಂತರ ನಕ್ಕಿದ್ದು
ಇವತ್ತು ಬೆಳಿಗ್ಗೆಯಿಂದ ಸುಮ್ಮನೆ ಮನೆಯಲ್ಲಿ ಕುಳಿತಿದ್ದೆ. ಯಾಕೊ ನಾ ದಿನಾ ಮಾಡುತ್ತಿದ್ದ ಕೆಲಸಗಳೆಲ್ಲಾ ಬೇಸರ ತಂದಿದ್ದವು.
ಮಧ್ಯಾಹ್ನ ಈಟಿವಿಯಲ್ಲಿ ಆ ದಿನಗಳು ಸಿನೆಮಾ ಬರುತ್ತೆ ಅಂತ ಗೊತ್ತಾಗಿ ಸಿನಿಮಾಕ್ಕೊಸ್ಕರಾನೆ ಕಾಯ್ತಿದ್ದೆ.
ಪ್ರತಿಯೊಂದು ಅಡ್ವಟೈಸನ್ನೂ ಯಮಯಾತನೆ ತರಹ ಅನುಭವಿಸಿದ್ದಾಯ್ತು. ಇನ್ನೆನು ೪:೩೦ ಗೆ ಸಿನೆಮಾ ೪:೨೦ ಕ್ಕೆ ಕರೆಂಟು ಹೊಯ್ತು.
ಈ ಮುಂಚೆ ಯಾವತ್ತೂ ೫ ನಿಮಿಶಕ್ಕಿಂತ ಜಾಸ್ತಿ ಕರೆಂಟು ಹೊಗಿದ್ದು ಇಲ್ಲ. ಆದ್ರೆ ಇವತ್ತು ೬:೦೦ ಗಂಟೆವರ್ಗೂ ಕರೆಂಟು ಬರ್ಲಿಲ್ಲ.ಮಲಗಿಕೊಂಡೆ.
ಎದ್ದ ಮೇಲೆ ಸ್ವಲ್ಪ ಸುಮ್ಮ್ನೆ ಸ್ವಲ್ಪೊತ್ತು ಕೂತ್ಕೊಂಡು ಧ್ಯಾನ ಮಾಡೋ ಪ್ರಯತ್ನ ಮಾಡಿದೆ.ಯಾಕೊ ಮನ್ಸ್ಸಾಲಿಲ್ಲ.
ಆಮೇಲೆ ಕೈಗೆ ಸಿಕ್ಕ ಬ್ಲೊಗ್ ಗಳನ್ನು ಓದುತ್ತಿದ್ದೆ.ಬಹಳಷ್ಟು ಬ್ಲೊಗ್ ಗಳು ಆಧ್ಯಾತ್ಮದ ಕತೆ ಹೇಳುತ್ತಿದ್ದವು.
who will cry when i die ಅಂತ ಮುಂಬಯಿಯ ಚಿಕ್ಕ ಹುಡುಗಿ ಬರೆದ ಕವನ ಓದಿ ವಿಚಿತ್ರ ಅನ್ನಿಸಿತು. ಆತ್ಮ ಮತ್ತು ದೇಹದ ಕಲ್ಪನೆಯನ್ನ ಅರಗಿಸಿಕೊಳ್ಳುವುದು ಆಗಲಿಲ್ಲ.ಸತ್ತ ಮೇಲೆ ಆತ್ಮ ಕ್ಕೆ ಮತ್ತೆ ಹೊಸ ಜೀವ ಅಂತ ಬರೆದ ಕಲ್ಪನೆಯ ಬಗ್ಗೆ ನಗು ಬಂತು.
ಆತ್ಮದ ಅರಿವು ನಮಗೆ ಬರಬಹುದಾದರೆ ಅದಕ್ಕೆ ನಮ್ಮ ಅರಿವಿದೆಯೆ ?
ನನಗೆನೋ ಸತ್ತ ಮೇಲೆ ಬದುಕೋ ಯೋಚನೆ ಮಾಡೊ ಜನರ ಬಗ್ಗೆ ವಿಚಿತ್ರ ನಿರಾಸಕ್ತಿ. ವಿಷಯ ನನ್ನ ಅಭಿಪ್ರಾಯ ಹೊರತು ಆ ಹುಡುಗಿಯ ಕವನದ ಬಗೆಗಿನ ಯಾವುದೇ ರೀತಿಯ ವಿಮರ್ಶೆಯಲ್ಲ. ನನಗೆ ಆಶ್ಚರ್ಯವಾಗಿದ್ದು ಆ ಹುಡುಗಿಯ ವಯಸ್ಸು ಮತ್ತು ಕವನದ ನಡುವಿನ ಅಂತರ.
ನಾನ್ಯಾವತ್ತು ೨೦ ಮುಟ್ಟದ ಹುಡುಗ ಹುಡುಗಿ ಆತ್ಮ ಮತ್ತು ದೇಹದ ಬಗ್ಗೆ ಮಾತಾಡಿದ್ದನ್ನ ನೋಡಿರಲಿಲ್ಲ. ಅಷ್ಟೇ ಏಕೆ ಈಗಲೂ ನನ್ನಲ್ಲಿ ಬದುಕಿನ ಬಗ್ಗೆ ನಿರ್ದಿಷ್ಟ ಅಭಿಪ್ರಾಯ ಇಲ್ಲ.
ಯಾವುದು ಪ್ರೀತಿ,
ಯಾವುದು ನೀತಿ,
ಬದುಕಿಗೆ ಬಂದ್ದದ್ದೇ ಸೊಗಸು.
ಸಂಪೂರ್ಣವಾಗಿ ಸಮಯದ ಗುಲಾಮಗಿರಿ.ನಾನು ನನಗೆ ಅಂತ ಇಟ್ಟು ಕೊಂಡಿರುವ ಕನಸುಗಳಲ್ಲಿ, ಬದುಕನ್ನ ಸಲೀಸಾಗಿಸುವುದಿದೆಯೆ ಹೊರತು ,
ನನ್ನ ಬದುಕಿನ ಅರ್ಥ,ಕಾರಣ,ಗುರಿ ಅಂತಾ ನಾನು ಯೋಚನೆ ಮಾಡೋದು ನಿಲ್ಲಿಸಿಯಾಗಿದೆ.
ನಾನು ಹುಡುಕಲು ಪ್ರಯತ್ನ ಮಾಡಿದಾಗಲೆಲ್ಲ ನನಗೆ ದೊರೆತ ಸಮಾಧಾನಕರ ಉತ್ತರ ಬದುಕುವುದು, ಮತ್ತು ನಮ್ಮಷ್ಟಕ್ಕೆ ನಾವೆ ಬದುಕುವುದು ಅಂತ.
ಸಮಾಜ ಸೇವೆ ಅಂತ ಭಾಷಣ ಮಾಡೋ ಜನ ಸಿಕ್ಕಾಗೆಲ್ಲಾ,ಅವರಿಗಾಗಿ ಅದನ್ನ ಇವರಿಗಾಗಿ ಇದನ್ನ ಮಾಡ್ಬೇಕು ಅಂತ ಮಾತು ಕೇಳಿದಾಗಲೆಲ್ಲಾ
"ರಾಮ ಹುಟ್ಟಿದ್ದು ಕೊಲ್ಲೋಕೆ
"ಆದ್ರೆ ರಾವಣ ಹುಟ್ಟಿದ್ದು ಕೊಲ್ಲಿಸ್ಕೋಳ್ಳೋಕಾ ?.
ರಾಮ ಹುಟ್ಟಿದ್ದಕ್ಕೆ ಕಾರಣ ಹೇಳೋ ಜನ ಅಂತ ಅನ್ನಿಸುತ್ತೆ. ಬದುಕನ್ನ ನಮ್ಮಷ್ಟಕ್ಕೆ ನಾವೇ ಬದುಕುವುದೆ ಬದುಕಿನ ಗುರಿ. ಹಂಗಂತ ರಾಮಾಯಣದ ಮತ್ತು ರಾಮ ತಪ್ಪಂತ ಅಲ್ಲ, ರಾವಣ ಸೀತೆಯನ್ನ ಕದ್ದ, ರಾಮ ರಾವಣನ್ನ ಕೊಂದ.
ಸಮಾಜ ಸೇವೆ ಅನ್ನೋದು ನನ್ನ ಮಟ್ಟಿಗೆ ನಾನು ನಿಷ್ಟೆಯಿಂದ ಬದುಕುವುದರ ಉಪ ಉತ್ಪನ್ನ"(by product)".
ಮಧ್ಯಾಹ್ನ ಈಟಿವಿಯಲ್ಲಿ ಆ ದಿನಗಳು ಸಿನೆಮಾ ಬರುತ್ತೆ ಅಂತ ಗೊತ್ತಾಗಿ ಸಿನಿಮಾಕ್ಕೊಸ್ಕರಾನೆ ಕಾಯ್ತಿದ್ದೆ.
ಪ್ರತಿಯೊಂದು ಅಡ್ವಟೈಸನ್ನೂ ಯಮಯಾತನೆ ತರಹ ಅನುಭವಿಸಿದ್ದಾಯ್ತು. ಇನ್ನೆನು ೪:೩೦ ಗೆ ಸಿನೆಮಾ ೪:೨೦ ಕ್ಕೆ ಕರೆಂಟು ಹೊಯ್ತು.
ಈ ಮುಂಚೆ ಯಾವತ್ತೂ ೫ ನಿಮಿಶಕ್ಕಿಂತ ಜಾಸ್ತಿ ಕರೆಂಟು ಹೊಗಿದ್ದು ಇಲ್ಲ. ಆದ್ರೆ ಇವತ್ತು ೬:೦೦ ಗಂಟೆವರ್ಗೂ ಕರೆಂಟು ಬರ್ಲಿಲ್ಲ.ಮಲಗಿಕೊಂಡೆ.
ಎದ್ದ ಮೇಲೆ ಸ್ವಲ್ಪ ಸುಮ್ಮ್ನೆ ಸ್ವಲ್ಪೊತ್ತು ಕೂತ್ಕೊಂಡು ಧ್ಯಾನ ಮಾಡೋ ಪ್ರಯತ್ನ ಮಾಡಿದೆ.ಯಾಕೊ ಮನ್ಸ್ಸಾಲಿಲ್ಲ.
ಆಮೇಲೆ ಕೈಗೆ ಸಿಕ್ಕ ಬ್ಲೊಗ್ ಗಳನ್ನು ಓದುತ್ತಿದ್ದೆ.ಬಹಳಷ್ಟು ಬ್ಲೊಗ್ ಗಳು ಆಧ್ಯಾತ್ಮದ ಕತೆ ಹೇಳುತ್ತಿದ್ದವು.
who will cry when i die ಅಂತ ಮುಂಬಯಿಯ ಚಿಕ್ಕ ಹುಡುಗಿ ಬರೆದ ಕವನ ಓದಿ ವಿಚಿತ್ರ ಅನ್ನಿಸಿತು. ಆತ್ಮ ಮತ್ತು ದೇಹದ ಕಲ್ಪನೆಯನ್ನ ಅರಗಿಸಿಕೊಳ್ಳುವುದು ಆಗಲಿಲ್ಲ.ಸತ್ತ ಮೇಲೆ ಆತ್ಮ ಕ್ಕೆ ಮತ್ತೆ ಹೊಸ ಜೀವ ಅಂತ ಬರೆದ ಕಲ್ಪನೆಯ ಬಗ್ಗೆ ನಗು ಬಂತು.
ಆತ್ಮದ ಅರಿವು ನಮಗೆ ಬರಬಹುದಾದರೆ ಅದಕ್ಕೆ ನಮ್ಮ ಅರಿವಿದೆಯೆ ?
ನನಗೆನೋ ಸತ್ತ ಮೇಲೆ ಬದುಕೋ ಯೋಚನೆ ಮಾಡೊ ಜನರ ಬಗ್ಗೆ ವಿಚಿತ್ರ ನಿರಾಸಕ್ತಿ. ವಿಷಯ ನನ್ನ ಅಭಿಪ್ರಾಯ ಹೊರತು ಆ ಹುಡುಗಿಯ ಕವನದ ಬಗೆಗಿನ ಯಾವುದೇ ರೀತಿಯ ವಿಮರ್ಶೆಯಲ್ಲ. ನನಗೆ ಆಶ್ಚರ್ಯವಾಗಿದ್ದು ಆ ಹುಡುಗಿಯ ವಯಸ್ಸು ಮತ್ತು ಕವನದ ನಡುವಿನ ಅಂತರ.
ನಾನ್ಯಾವತ್ತು ೨೦ ಮುಟ್ಟದ ಹುಡುಗ ಹುಡುಗಿ ಆತ್ಮ ಮತ್ತು ದೇಹದ ಬಗ್ಗೆ ಮಾತಾಡಿದ್ದನ್ನ ನೋಡಿರಲಿಲ್ಲ. ಅಷ್ಟೇ ಏಕೆ ಈಗಲೂ ನನ್ನಲ್ಲಿ ಬದುಕಿನ ಬಗ್ಗೆ ನಿರ್ದಿಷ್ಟ ಅಭಿಪ್ರಾಯ ಇಲ್ಲ.
ಯಾವುದು ಪ್ರೀತಿ,
ಯಾವುದು ನೀತಿ,
ಬದುಕಿಗೆ ಬಂದ್ದದ್ದೇ ಸೊಗಸು.
ಸಂಪೂರ್ಣವಾಗಿ ಸಮಯದ ಗುಲಾಮಗಿರಿ.ನಾನು ನನಗೆ ಅಂತ ಇಟ್ಟು ಕೊಂಡಿರುವ ಕನಸುಗಳಲ್ಲಿ, ಬದುಕನ್ನ ಸಲೀಸಾಗಿಸುವುದಿದೆಯೆ ಹೊರತು ,
ನನ್ನ ಬದುಕಿನ ಅರ್ಥ,ಕಾರಣ,ಗುರಿ ಅಂತಾ ನಾನು ಯೋಚನೆ ಮಾಡೋದು ನಿಲ್ಲಿಸಿಯಾಗಿದೆ.
ನಾನು ಹುಡುಕಲು ಪ್ರಯತ್ನ ಮಾಡಿದಾಗಲೆಲ್ಲ ನನಗೆ ದೊರೆತ ಸಮಾಧಾನಕರ ಉತ್ತರ ಬದುಕುವುದು, ಮತ್ತು ನಮ್ಮಷ್ಟಕ್ಕೆ ನಾವೆ ಬದುಕುವುದು ಅಂತ.
ಸಮಾಜ ಸೇವೆ ಅಂತ ಭಾಷಣ ಮಾಡೋ ಜನ ಸಿಕ್ಕಾಗೆಲ್ಲಾ,ಅವರಿಗಾಗಿ ಅದನ್ನ ಇವರಿಗಾಗಿ ಇದನ್ನ ಮಾಡ್ಬೇಕು ಅಂತ ಮಾತು ಕೇಳಿದಾಗಲೆಲ್ಲಾ
"ರಾಮ ಹುಟ್ಟಿದ್ದು ಕೊಲ್ಲೋಕೆ
"ಆದ್ರೆ ರಾವಣ ಹುಟ್ಟಿದ್ದು ಕೊಲ್ಲಿಸ್ಕೋಳ್ಳೋಕಾ ?.
ರಾಮ ಹುಟ್ಟಿದ್ದಕ್ಕೆ ಕಾರಣ ಹೇಳೋ ಜನ ಅಂತ ಅನ್ನಿಸುತ್ತೆ. ಬದುಕನ್ನ ನಮ್ಮಷ್ಟಕ್ಕೆ ನಾವೇ ಬದುಕುವುದೆ ಬದುಕಿನ ಗುರಿ. ಹಂಗಂತ ರಾಮಾಯಣದ ಮತ್ತು ರಾಮ ತಪ್ಪಂತ ಅಲ್ಲ, ರಾವಣ ಸೀತೆಯನ್ನ ಕದ್ದ, ರಾಮ ರಾವಣನ್ನ ಕೊಂದ.
ಸಮಾಜ ಸೇವೆ ಅನ್ನೋದು ನನ್ನ ಮಟ್ಟಿಗೆ ನಾನು ನಿಷ್ಟೆಯಿಂದ ಬದುಕುವುದರ ಉಪ ಉತ್ಪನ್ನ"(by product)".
ಜೂನ್ 14, 2008
ನೆನಪಾಗಿ ಕಾಡುತ್ತಿರುವ ಆಡದ ಮಾತುಗಳು ಮತ್ತು ಬೆಳದಿಂಗಳ ಬಾಲೆ
ಮತ್ತೆ ಬೆಳದಿಂಗಳ ಬಾಲೆ ಸಿನೆಮಾ ನೋಡಿದೆ. ಮೊದಲಿನಂತೆ ಈ ಸಲ ಕೂಡ ಬಹಳ ಚೆನ್ನಾಗಿದೆ ಅನ್ನಿಸಿತು.
ಅನಂತ್ನಾಗ್ ರ ಬೊಂಬಟ್ ಅಭಿನಯ , ಸುಮನ್ ನಗರ್ಕರ್ ರ ಮುದ್ದು ಮುಖ,ಸುನಿಲ್ ಕುಮಾರ್ ದೆಸಾಯಿಯವರ ಒಳ್ಳೆನಿರ್ದೇಶನ ಎಂಥವರನ್ನು ಮರುಳುಮಾಡಬಲ್ಲ ಕತೆ.
ಮೊದಲನೆ ಸಲ ಈ ಸಿನೆಮಾ ನೋಡಿದಾಗ ಕೊನೆಗೆ ಕಣ್ಣೀರಿಟ್ಟಿದ್ದೆ.ನನ್ನ ಬೆಳದಿಂಗಳ ಬಾಲೆ ನನ್ನ ಕೈತಪ್ಪದಿರುವಂತೆಎಚ್ಚರಿಕೆಯಿಂದಿರಬೇಕು ಅಂತ ನಿರ್ಧಾರ ಕೂಡಾ ಮಾಡಿದ್ದೆ. ಆದರೆ ನಾನು ತುಂಬಾ ಚಿಕ್ಕವನಾಗಿದ್ದೆ ಆಗ ನನಗೆ ಅಂಥಾ ಬಾಲೆಯಸ್ವಂತದ ಒಂದು ಸಣ್ಣ ಕಲ್ಪನೆಯೂ ಇರಲ್ಲಿಲ್ಲ.
ಆದರೆ ಸಿನೆಮಾ ನೋಡಿ ಒಬ್ಬ ಬಾಲೆ ಇರಲೇಬೇಕು ಅನ್ನೊ ಸತ್ಯ ಅಷ್ಟೋ ಇಷ್ಟೊ ಗೊತ್ತಾಗಿತ್ತು.
ಬೆಲದಿಂಗಳಬಾಲೆಯ ಹುರುಪಿನಲ್ಲೆ ನನ್ನವಳಲಲ್ಲದ ನನ್ನವಳಿಗಾಗಿ ಪತ್ರ ಮತ್ತು ಕವನಗಳನ್ನ ಬರೆಯಲು ಶುರು ಮಾಡಿದೆ. ಪತ್ರಬರೆಯಲು ಕುಳಿತಾಗ ಶಬ್ದಗಳಿಗಾಗಿ ತಡಕಾಡಿದೆ,ಹೇಗೆ ಶುರು ಮಾಡಬೇಕು ಅಂತ ಗೊತ್ತಾಗದೆ ನರಳಿದೆ.ಸುಮಾರು ಶಬ್ದಗಳನ್ನಬರೆದು ಕಾಗದ ಹರಿದು ಹಾಕಿದೆ!
ಹಾಗೋ ಹೀಗೋ ಕಷ್ಟಪಟ್ಟು ನನಗೆ ಸಮಾಧಾನವಾಗೊ ಹಾಗೆ ಬರೆದ ಮೇಲೆ ಮನೆಯಲ್ಲಿ ಯಾರಿಗೂ ಕಾಣದಂತೆ ಅದನ್ನ ಬಚ್ಚಿಟ್ಟುಕಾಪಾದಿದ್ದು ಆಯ್ತು. ಹಾಗೆ ನಾ ಬರೆದ ಕವನಗಳಲ್ಲಿ ಕೆಲವನ್ನು ಈಗಾಗಲೆ ತೆರೆದಿಟ್ಟಿದಾಗಿದೆ.
ಆದರೆ ಎಲ್ಲಾ ಕವನಗಳನ್ನು ನಾನು ಕನಸಿನ ಬಾಲೆಗಾಗಿ ಬರೆದಿಲ್ಲ. ಒಬ್ಬಳು ಸಿಕ್ಕಿದ್ದಳು, ಅವಳೆ ನಾ ನೆನೆಸುತ್ತಿದ್ದ ಬೆಳದಿಂಗಳಬಾಲೆಅಂತ ಅಂದ್ಕೊಂಡ್ಡಿದ್ದೆ. ಅವಳಿಗೆ ಕವನ ತೋರಿಸೋದು ಬಿಡಿ,ನನ್ನ ಭಾವನೆಗಳನ್ನು ಅವಳೆದುರಿಗೆ ಸರಿಯಾಗಿ ಹೇಳೋದೂ ಸಾಧ್ಯಆಗಲಿಲ್ಲ.ಅವಳಿಗೆ ಅರ್ಥ ಮಾಡಿಸುವ ಪ್ರಯತ್ನ ನಾನು ಜಾಸ್ತಿ ಮಾದಲ್ಲಿಲ್ಲ ಯಾಕಂದ್ರೆ ಅವಳಿಗೆ ಕನ್ನಡ ಗೊತ್ತಿರಲಿಲ್ಲ :).
ಯಾಕೊ ಕನ್ನಡತಿಯಲ್ಲದ ಬಾಲೆ ಬೆಳದಿಂಗಳವಳಲ್ಲ ಅಂತ ಸುಮ್ಮನಾದೆ. ಆದರೆ ಒಂದು ಬಲವಾದ ಪ್ರಯತ್ನ ನಾನು ಮಾಡಲೇಇಲ್ಲ !
ಆಮೆಲೆ ಈ ನಿಟ್ಟಿನಲ್ಲಿ ನನ್ನ ಹುಡುಕಾಟ ನಿಂತು ಹೊಗಿತ್ತು.ಬೇರೆಲ್ಲೋ ಗಮನ ಹರಿದು ಹೋಗಿತ್ತು.
ಮತ್ತೆ ಸಿನೆಮಾ ನೋಡಿದಾಗ, ಇದೆಲ್ಲಾ ಮತ್ತೆ ನೆನಪಾಯಿತು. ನಾನಾಡದ ಮಾತು ಮತ್ತೋಮ್ಮೆ ನೆನಪಾಯಿತು. ಆದರೆ ಈ ಸಲನಾನು ಕಣ್ಣಿರಿಡಲಿಲ್ಲ. ಹದವಾಗಿ ನಕ್ಕು ಸುಮ್ಮನಾದೆ.ಏಕೆಂದರೆ ನನಗೆ ಗೊತ್ತಾಗಿತ್ತು ಕಾಲನ ಪೆಟ್ಟಿಗೆ ಕಲ್ಪನೆ ಕೂಡಾನಾಶವಾಗುವುದೆಂದು.
ಅನಂತ್ನಾಗ್ ರ ಬೊಂಬಟ್ ಅಭಿನಯ , ಸುಮನ್ ನಗರ್ಕರ್ ರ ಮುದ್ದು ಮುಖ,ಸುನಿಲ್ ಕುಮಾರ್ ದೆಸಾಯಿಯವರ ಒಳ್ಳೆನಿರ್ದೇಶನ ಎಂಥವರನ್ನು ಮರುಳುಮಾಡಬಲ್ಲ ಕತೆ.
ಮೊದಲನೆ ಸಲ ಈ ಸಿನೆಮಾ ನೋಡಿದಾಗ ಕೊನೆಗೆ ಕಣ್ಣೀರಿಟ್ಟಿದ್ದೆ.ನನ್ನ ಬೆಳದಿಂಗಳ ಬಾಲೆ ನನ್ನ ಕೈತಪ್ಪದಿರುವಂತೆಎಚ್ಚರಿಕೆಯಿಂದಿರಬೇಕು ಅಂತ ನಿರ್ಧಾರ ಕೂಡಾ ಮಾಡಿದ್ದೆ. ಆದರೆ ನಾನು ತುಂಬಾ ಚಿಕ್ಕವನಾಗಿದ್ದೆ ಆಗ ನನಗೆ ಅಂಥಾ ಬಾಲೆಯಸ್ವಂತದ ಒಂದು ಸಣ್ಣ ಕಲ್ಪನೆಯೂ ಇರಲ್ಲಿಲ್ಲ.
ಆದರೆ ಸಿನೆಮಾ ನೋಡಿ ಒಬ್ಬ ಬಾಲೆ ಇರಲೇಬೇಕು ಅನ್ನೊ ಸತ್ಯ ಅಷ್ಟೋ ಇಷ್ಟೊ ಗೊತ್ತಾಗಿತ್ತು.
ಬೆಲದಿಂಗಳಬಾಲೆಯ ಹುರುಪಿನಲ್ಲೆ ನನ್ನವಳಲಲ್ಲದ ನನ್ನವಳಿಗಾಗಿ ಪತ್ರ ಮತ್ತು ಕವನಗಳನ್ನ ಬರೆಯಲು ಶುರು ಮಾಡಿದೆ. ಪತ್ರಬರೆಯಲು ಕುಳಿತಾಗ ಶಬ್ದಗಳಿಗಾಗಿ ತಡಕಾಡಿದೆ,ಹೇಗೆ ಶುರು ಮಾಡಬೇಕು ಅಂತ ಗೊತ್ತಾಗದೆ ನರಳಿದೆ.ಸುಮಾರು ಶಬ್ದಗಳನ್ನಬರೆದು ಕಾಗದ ಹರಿದು ಹಾಕಿದೆ!
ಹಾಗೋ ಹೀಗೋ ಕಷ್ಟಪಟ್ಟು ನನಗೆ ಸಮಾಧಾನವಾಗೊ ಹಾಗೆ ಬರೆದ ಮೇಲೆ ಮನೆಯಲ್ಲಿ ಯಾರಿಗೂ ಕಾಣದಂತೆ ಅದನ್ನ ಬಚ್ಚಿಟ್ಟುಕಾಪಾದಿದ್ದು ಆಯ್ತು. ಹಾಗೆ ನಾ ಬರೆದ ಕವನಗಳಲ್ಲಿ ಕೆಲವನ್ನು ಈಗಾಗಲೆ ತೆರೆದಿಟ್ಟಿದಾಗಿದೆ.
ಆದರೆ ಎಲ್ಲಾ ಕವನಗಳನ್ನು ನಾನು ಕನಸಿನ ಬಾಲೆಗಾಗಿ ಬರೆದಿಲ್ಲ. ಒಬ್ಬಳು ಸಿಕ್ಕಿದ್ದಳು, ಅವಳೆ ನಾ ನೆನೆಸುತ್ತಿದ್ದ ಬೆಳದಿಂಗಳಬಾಲೆಅಂತ ಅಂದ್ಕೊಂಡ್ಡಿದ್ದೆ. ಅವಳಿಗೆ ಕವನ ತೋರಿಸೋದು ಬಿಡಿ,ನನ್ನ ಭಾವನೆಗಳನ್ನು ಅವಳೆದುರಿಗೆ ಸರಿಯಾಗಿ ಹೇಳೋದೂ ಸಾಧ್ಯಆಗಲಿಲ್ಲ.ಅವಳಿಗೆ ಅರ್ಥ ಮಾಡಿಸುವ ಪ್ರಯತ್ನ ನಾನು ಜಾಸ್ತಿ ಮಾದಲ್ಲಿಲ್ಲ ಯಾಕಂದ್ರೆ ಅವಳಿಗೆ ಕನ್ನಡ ಗೊತ್ತಿರಲಿಲ್ಲ :).
ಯಾಕೊ ಕನ್ನಡತಿಯಲ್ಲದ ಬಾಲೆ ಬೆಳದಿಂಗಳವಳಲ್ಲ ಅಂತ ಸುಮ್ಮನಾದೆ. ಆದರೆ ಒಂದು ಬಲವಾದ ಪ್ರಯತ್ನ ನಾನು ಮಾಡಲೇಇಲ್ಲ !
ಆಮೆಲೆ ಈ ನಿಟ್ಟಿನಲ್ಲಿ ನನ್ನ ಹುಡುಕಾಟ ನಿಂತು ಹೊಗಿತ್ತು.ಬೇರೆಲ್ಲೋ ಗಮನ ಹರಿದು ಹೋಗಿತ್ತು.
ಮತ್ತೆ ಸಿನೆಮಾ ನೋಡಿದಾಗ, ಇದೆಲ್ಲಾ ಮತ್ತೆ ನೆನಪಾಯಿತು. ನಾನಾಡದ ಮಾತು ಮತ್ತೋಮ್ಮೆ ನೆನಪಾಯಿತು. ಆದರೆ ಈ ಸಲನಾನು ಕಣ್ಣಿರಿಡಲಿಲ್ಲ. ಹದವಾಗಿ ನಕ್ಕು ಸುಮ್ಮನಾದೆ.ಏಕೆಂದರೆ ನನಗೆ ಗೊತ್ತಾಗಿತ್ತು ಕಾಲನ ಪೆಟ್ಟಿಗೆ ಕಲ್ಪನೆ ಕೂಡಾನಾಶವಾಗುವುದೆಂದು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಈ ಬ್ಲಾಗ್ ಅನ್ನು ಹುಡುಕಿ
- ಏಪ್ರಿಲ್ 2020 (1)
- ಮಾರ್ಚ್ 2020 (1)
- ಸೆಪ್ಟೆಂಬರ್ 2019 (1)
- ಸೆಪ್ಟೆಂಬರ್ 2017 (2)
- ಅಕ್ಟೋಬರ್ 2010 (1)
- ಮೇ 2010 (5)
- ಏಪ್ರಿಲ್ 2010 (8)
- ನವೆಂಬರ್ 2008 (1)
- ಆಗಸ್ಟ್ 2008 (1)
- ಜುಲೈ 2008 (5)
- ಜೂನ್ 2008 (3)
- ಮೇ 2008 (3)
- ಮಾರ್ಚ್ 2008 (5)